ಕರ್ನಾಟಕ

ದುಡ್ಡಿಗಾಗಿ ತಂದೆಯನ್ನೇ ಕೊಚ್ಚಿ ಕೊಂದ ಮಗ

Pinterest LinkedIn Tumblr

crimeಕೊಪ್ಪಳ, ನ. ೧೫- ಮರಗಳನ್ನು ಮಾರಿದ ಹಣವನ್ನು ಕೊಡಲಿಲ್ಲ ಎಂಬ ಕಾರಣಕ್ಕೆ ರೊಚ್ಚಿಗೆದ್ದ ಮಗನೊಬ್ಬ ತನ್ನ ತಂದೆಯನ್ನೇ ಮಾರಕಾಸ್ತ್ರದಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ಕೂಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಹಾಬಲಕಟ್ಟಿ ಗ್ರಾಮದ ಹೊರವಲಯದ ಜಮೀನೊಂದರಲ್ಲಿ ಇಂದು ಬೆಳಗ್ಗೆ ನಡೆದಿದೆ.
ಹಾಬಲಕಟ್ಟಿ ಗ್ರಾಮದ ನಿವಾಸಿ ಸಂಗಪ್ಪ ಸುಂಕದ್ (58) ಎಂಬಾತ ಮಗನಿಂದ ಕೊಲೆಗೀಡಾದ ತಂದೆ. ಈತನ ಮಗ ಮಲ್ಲಪ್ಪ ಕೊಲೆ ಮಾಡಿ ಪರಾರಿಯಾಗಿರುವ ಆರೋಪಿ. ಮಲ್ಲಪ್ಪ ತನ್ನ ತಂದೆ ಸಂಗಪ್ಪನನ್ನು ಬಾದಿಮನಾಳ ಕ್ರಾಸ್ ಬಳಿಯ ತಮ್ಮದೇ ಜಮೀನಿನಲ್ಲಿ ಮಾರಕಾಸ್ತ್ರದಿಂದ ಕೊಲೆ ಮಾಡಿ ಪರಾರಿಯಾಗಿದ್ದಾನೆ ಎನ್ನಲಾಗಿದೆ.
ಹೊಲದಲ್ಲಿದ್ದ ಮರಗಳನ್ನು ಸಂಗಪ್ಪ ಇತ್ತೀಚಿಗೆ ಮಾರಾಟ ಮಾಡಿದ್ದನಂತೆ. ಅದರಿಂದ ಬಂದ ಹಣವನ್ನು ತನಗೆ ಕೊಡಲಿಲ್ಲ ಎಂಬ ಕಾರಣಕ್ಕೆ ರೊಚ್ಚಿಗೆದ್ದ ಮಗ ಮಲ್ಲಪ್ಪ, ತಂದೆ ಸಂಗಪ್ಪನನ್ನು ಕೊಲೆ ಮಾಡಿದ್ದಾನೆ ಎಂದು ತಿಳಿದು ಬಂದಿದೆ. ಸ್ಥಳಕ್ಕೆ ಹನುಮಸಾಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪರಾರಿಯಾಗಿರುವ ಆರೋಪಿ ಮಲ್ಲಪ್ಪನ ಬಂಧನಕ್ಕೆ ಬಲೆ ಬೀಸಿದ್ದಾರೆ. ಹನುಮಸಾಗರ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.

Comments are closed.