ಕರ್ನಾಟಕ

ಯಾವ ಅಮಾವಾಸ್ಯೆ ರೀ…! ಅರವಿಂದ್ ಜಾಧವ್ ಗೆ ಸಿಎಂ ಸಿದ್ದರಾಮಯ್ಯ

Pinterest LinkedIn Tumblr

Jadavಬೆಂಗಳೂರು:ಸರ್…ಆಷಾಢ ಅಮಾವಾಸ್ಯೆ ಇದೆ..ಹಾಗಾಗಿ ಮಳೆಗಾಲದ ಅಧಿವೇಶನ ಶುರು ಮಾಡಬಾರದು. ಅಮಾವಾಸ್ಯೆ ಕಳೆದ ಮೇಲೆ ಅಧಿವೇಶನ ಶುರು ಮಾಡೋಣ…ಇದು ಮುಖ್ಯ ಕಾರ್ಯದರ್ಶಿ ಅರವಿಂದ್ ಜಾಧವ್ ಅವರು ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ನೀಡಿದ ಸಲಹೆ!

ಜಾಧವ್ ಮಾತಿಗೆ ಸಿಎಂ ಸಿದ್ದರಾಮಯ್ಯ…ರೀ ಯಾವ ಅಮಾವಾಸ್ಯೆ ಇದ್ರೆ ಏನಂತೆ…ಎಂತದು ಆಗಲ್ಲ…ಸುಮ್ನಿರಿ. ಅವತ್ತೇ ಅಧಿವೇಶನ ಶುರು ಮಾಡೋಣ ಎಂದು ಸಂಪುಟ ಸಭೆಯಲ್ಲಿ ಹಾಸ್ಯ ಚಟಾಕಿ ಹಾರಿಸಿದ ಪ್ರಸಂಗ ನಡೆಯಿತು.

ಏನಯ್ಯಾ ಪರಮೇಶ್ವರ್ ನಾಯ್ಕ್:
ಬುಧವಾರ ವಿಧಾನಸಭೆಯಲ್ಲಿ ಸಚಿವ ಸಂಪುಟ ಸಭೆ ಆರಂಭವಾದಾಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಏನಯ್ಯಾ ಪರಮೇಶ್ವರ್ ನಾಯ್ಕ್ ಎಂದು ವಿಚಾರಿಸಿದರು. ಅದಕ್ಕೆ ನಂದೇನೂ ಇಲ್ಲ ಸರ್ ಎಂದು ನಾಯ್ಕ್ ಪ್ರತಿಕ್ರಿಯಿಸಿದರು. ಬಳಿಕ ಸಭೆಯಲ್ಲಿ ಡಿವೈಎಸ್ ಪಿ ಅನುಪಮಾ ಶೆಣೈ ವರ್ತನೆ ಕುರಿತು ಕೆಲವು ಸಚಿವರು ಆಕ್ಷೇಪ ಎತ್ತಿದ್ದರು ಎಂದು ಮಾಧ್ಯಮದ ವರದಿ ತಿಳಿಸಿದೆ.
-ಉದಯವಾಣಿ

Comments are closed.