ಉತ್ತರಕನ್ನಡ: ಪೊಲೀಸರ ಸಮಸ್ಯೆ ಬಗೆಹರಿಸುವಂತೆ ಆಗ್ರಹಿಸಿ ಕಾರವಾರದಲ್ಲಿ ಶನಿವಾರ ಪೊಲೀಸರ ಪರವಾಗಿ ಜನಶಕ್ತಿ ವೇದಿಕೆ ಕಾರ್ಯಕರ್ತರು ಮೆರವಣಿಗೆಯಲ್ಲಿ ತೆರಳಿ, ಮೌನ ಪ್ರತಿಭಟನೆ ಆರಂಭಿಸಿದ್ದಾರೆ.
‘ಪೊಲೀಸರು ಗುಲಾಮರಲ್ಲ’, ‘ತೊಲಗಲಿ ಗುಲಾಮಗಿರಿ ತೊಲಗಲಿ’ ‘ಆಗದಿರಲಿ ಮಾನವ ಹಕ್ಕುಗಳ ಉಲ್ಲಂಘನೆ’, ‘ಪೊಲೀಸರು ಪ್ರಾಣಿಗಳಲ್ಲ ನಮ್ಮಂತೆ ಮನುಷ್ಯರು’ ಎಂಬ ಘೋಷಣೆಗಳನ್ನು ಒಳಗೊಂಡ ಭಿತ್ತಿ ಫಲಕಗಳನ್ನು ಹಿಡಿದು ಮೆರವಣಿಗೆ ನಡೆಸಿದರು.
ಮೆರವಣಿಗೆ ನಡೆಸಿದ ಕಾರ್ಯಕರು, ಪೊಲೀಸರ ಮನವೊಲಿಕೆಯ ಬಳಿಕ ನಗರದ ಮಿತ್ರ ಸಮಾಜ ಬಳಿ ಮೌನ ಪ್ರತಿಭಟನೆಗೆ ಮುಂದಾದರು.
ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಪೊಲೀಸರ ಸಮಸ್ಯೆ ಬಗೆಹರಿಸುವಂತೆ ಮನವಿ ಸಲ್ಲಿಸಲಾಯಿತು.
Comments are closed.