ಕರ್ನಾಟಕ

ಪ್ರಿಯಕರನ ಸಾವಿನ ಆಘಾತ ತಡೆಯಲಾಗದೆ ಆತ್ಮಹತ್ಯೆಗೆ ಶರಣಾದ ಪ್ರೇಯಸಿ

Pinterest LinkedIn Tumblr

suಬೆಂಗಳೂರು, ಮೇ 7- ಪ್ರೇಮ ವೈಫಲ್ಯದ ಹಿನ್ನೆಲೆಯಲ್ಲಿ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದ ಪ್ರಿಯಕರನ ಸಾವಿನಿಂದ ಆಘಾತಕ್ಕೊಳಗಾದ ಪ್ರೇಯಸಿ ಸಹ ಆತ್ಮಹತ್ಯೆ ಮಾಡಿರುವ ದಾರುಣ ಘಟನೆ ನಡೆದಿದೆ.

ಹಾಸನದ ರಾಘವೇಂದ್ರ(30) ಹಾಗೂ ಬೆಂಗಳೂರಿನ ಅನು (25)ಆತ್ಮಹತ್ಯೆಗೆ ಶರಣಾದ ಪ್ರೇಮಿಗಳು. ಕಳೆದ ಒಂದು ವರ್ಷದಿಂದ ಪರಸ್ಪರ ಪ್ರೀತಿಸುತ್ತಿದ್ದ ಇವರ ಮದುವೆಗೆ ಪೋಷಕರು ನಿರಾಕರಿಸಿದ್ದರು. ಅಲ್ಲದೆ ಅನು ಪೋಷಕರು ಆಕೆಗೆ ಬೇರೆ ಹುಡುಗನೊಂದಿಗೆ ಮದುವೆ ಮಾಡಿದ್ದರು. ಇದರಿಂದ ನೊಂದ ರಾಘವೇಂದ್ರ ನಿನ್ನೆ ಹಾಸನದ ಲಕ್ಷ್ಮೀಪುರದಲ್ಲಿರುವ ತಮ್ಮ ಮನೆಯಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ರಾತ್ರಿ ರಾಘವೇಂದ್ರ ಮೊಬೈಲ್‌ಗೆ ಅನು ಕರೆ ಮಾಡಿದಾಗ ಆತ ಆತ್ಮಹತ್ಯೆ ಮಾಡಿಕೊಂಡಿರುವ ವಿಚಾರ ಪೊಲೀಸರಿಂದ ತಿಳಿದಿದೆ. ಇದರಿಂದ ಆಘಾತಗೊಂಡ ಆಕೆ ಬೆಂಗಳೂರಿನ ವಿಜಯನಗರದ ಮನೆಯಲ್ಲಿ ತಾನೂ ಸಹ ಆತ್ಮಹತ್ಯೆ ಮಾಡಿಕೊಂಡು ಸಾವಿಗೆ ಶರಣಾಗಿದ್ದಾಳೆ.

Write A Comment