ಕರ್ನಾಟಕ

ಗಯ್ಯಾಳಿಯರ ಕಾಲೇಜಿಗೆ ನೂತನ ಪ್ರಾಂಶುಪಾಲರು

Pinterest LinkedIn Tumblr

5ಬೆಂಗಳೂರು : ಕಾಲೇಜಿನ ಪ್ರಿನ್ಸಿಪಾಲ್‌ ಬದಲಾವಣೆಗೆ ಆಗ್ರಹಿಸಿ ಮಹಾರಾಣಿ ಕಾಲೇಜು ವಿದ್ಯಾರ್ಥಿನಿಯರ ಗುಂಪುಗಳ ನಡುವೆ ಕಾಲೇಜು ಆವರಣದಲ್ಲೇ ಶನಿವಾರ ಭಾರೀ ಹೊಡೆದಾಟ ನಡೆದಿದೆ. ಇದರ ಬೆನ್ನಲ್ಲೇ ಕಾಲೇಜಿಗೆ ನೂತನ ಪ್ರಾಂಶಪಾಲರನ್ನು ಆಯ್ಕೆಮಾಡಲಾಗಿದೆ ಎಂದು ಶಿಕ್ಷಣ ಮಂಡಳಿ ಹೇಳಿದೆ.

ಶುಕ್ರವಾರದಿಂದ ಪದವಿ ವಿದ್ಯಾರ್ಥಿನಿಯರ ಗುಂಪೊಂದು ಪ್ರಾಶುಪಾಲೆ ಕೋಮಲಾರವರ ವರ್ಗಾವಣೆ ಕುರಿತು ಪ್ರತಿಭಟನೆ ನಡೆಸುತಿತ್ತು, ಶನಿವಾರ ಪ್ರತಿಭಟನೆ ತೀರ್ವ ಸ್ವರೂಪ ಪಡೆದಿದ್ದು ಎರಡು ಗುಂಪುಗಳ ನಡುವೆ ಹೊಡೆದಾಟವುಂಟಾಗಿ ಕಾಲೇಜಿನಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು.

ಈ ವೇಳೆ ಕೋಮಲಾ ಅವರ ಪ್ರತಿಕ್ರತಿಯನ್ನು ದಹಿಸಲು ಯತ್ನಿಸಿದಾಗ ವಿದ್ಯಾರ್ಥಿನಿಯರ ನಡುವೆ ಮಾತಿನ ಚಕಮಕಿ ನಡೆದಿದೆ. ಪೊಲೀಸರ ಮುಂದೆಯೇ ವಿದ್ಯಾರ್ಥಿನಿಯರು ಪರಸ್ಪರ ಜಡೆ ಎಳೆದುಕೊಂಡು ಬಡಿದಾಡಿದ್ದಾರೆ.

ಈ ಹಿನ್ನಲೆಯಲ್ಲಿ ಕಾಲೇಜು ಶಿಕ್ಷಣ ಮಂಡಳಿ ಅದೇ ಕಾಲೇಜಿನ ಇತಿಹಾಸ ಉಪನ್ಯಾಸಕಿಯಾಗಿರುವ ಪ್ರೋ. ಶಾಂತಕುಮಾರಿಯವರನ್ನು ನೂತನ ಪ್ರಾಂಶುಪಾಲರನ್ನಾಗಿ ನೇಮಕ ಮಾಡಲು ಆದೇಶಿಸಿದೆ.

Write A Comment