ತಾನ್ಝಾನಿಯದ ಕಾವೇರಿ ಕನ್ನಡ ಸಂಘವು ನವೆಂಬರ್ 28ರ ಶನಿವಾರದಂದು ಸಂಜೆ 6.30ಕ್ಕೆ ಕಿಸುತುನ ಪ್ರಮುಖ್ ಸ್ವಾಮಿ ಮಹಾರಾಜ್ ಸ್ಟ್ರೀಟ್ನ ಬಾಟಿಯ ಮಹಾಜನ್ ಸಭಾಂಗಣದಲ್ಲಿ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮವನ್ನು ಆಯೋಜಿಸಿದೆ.
ಮುಖ್ಯ ಅತಿಥಿಯಾಗಿ ತಾನ್ಝಾನಿದಲ್ಲಿರುವ ಭಾರತೀಯ ಹೈಕಮಿಷನರ್ ಸಂದೀಪ್ ಆರ್ಯ ಭಾಗವಹಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಸಾಂಸ್ಕೃತಿಕ, ಮನೋರಂಜನೆ ಹಾಗೂ ವಿವಿಧ ನೃತ್ಯರೂಪಕಗಳು ಪ್ರದರ್ಶನಗೊಳ್ಳಲಿದೆ.