ಕರ್ನಾಟಕ

ಸಿ.ಟಿ.ರವಿ ಒಬ್ಬ ಅಜ್ಞಾನಿ : ಸಂಸದ ಎಚ್.ವಿಶ್ವನಾಥ್ ತಿರುಗೇಟು

Pinterest LinkedIn Tumblr

raviಬೆಂಗಳೂರು, ಸೆ.23- ಕೇಂದ್ರ ಸಾಹಿತ್ಯ ಅಕಾಡೆಮಿ ಪವಿತ್ರವಾದುದು. ಅದನ್ನು ಅಜ್ಞಾನಿ ಪ್ರಶಸ್ತಿ ಎಂದಿರುವ ಶಾಸಕ ಸಿ.ಟಿ.ರವಿ ಅವರೇ ಒಬ್ಬ ದೊಡ್ಡ ಅಜ್ಞಾನಿ ಎಂದು ಮಾಜಿ ಸಂಸದ ಎಚ್.ವಿಶ್ವನಾಥ್ ತಿರುಗೇಟು ನೀಡಿದರು. ಇಲ್ಲಿನ  ಅರಸು ಭವನದಲ್ಲಿ ಇಂದು ಏರ್ಪಡಿಸಿದ್ದ ಅರಸು ಜನ್ಮ ಶತಮಾನೋತ್ಸವ ಕಾರ್ಯಕಾರಿಣಿ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಖ್ಯಾತ ಸಾಹಿತಿ ಹಾಗೂ ವಿಚಾರವಾದಿ ಪ್ರೊ.ಕೆ.ಎಸ್.ಭಗವಾನ್  ಅವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ನೀಡಿರುವುದನ್ನು ಟೀಕಿಸಿದ್ದ ಶಾಸಕ ಸಿ.ಟಿ.ರವಿ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಅಜ್ಞಾನಿ ಪ್ರಶಸ್ತಿ ಎಂದು ಹೇಳುವ ಮೂಲಕ ಪ್ರಶಸ್ತಿಯ ಗೌರವಕ್ಕೆ ಚ್ಯುತಿ ಉಂಟುಮಾಡಿದ್ದಾರೆ. ಅಕಾಡೆಮಿ ಪ್ರಶಸ್ತಿಗೆ ಅದರದೇ ಆದ ಪಾವಿತ್ರ್ಯತೆ ಇದೆ.

ಇಂತಹ ಗೌರನಾನ್ವಿತ ಪ್ರಶಸ್ತಿಯನ್ನು ಅಜ್ಞಾನಿ ಪ್ರಶಸ್ತಿ ಎಂದು ಕರೆದ ಸಿ.ಟಿ.ರವಿ ನಿಜಕ್ಕೂ ಒಬ್ಬ ದೊಡ್ಡ ಅಜ್ಞಾನಿ ಎಂದು ಖಂಡಿಸಿದರು. ಆಗ್ರಹ: ಅತ್ಯಾಚಾರ ಪ್ರಕರಣದಲ್ಲಿ ಆರೋಪಿಯಾಗಿರುವ ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ಅವರನ್ನು ಕೂಡಲೇ ಬಂಧಿಸಬೇಕು ಮತ್ತು ಅವರ  ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಬೇಕು ಎಂದು ವಿಶ್ವನಾಥ್ ಆಗ್ರಹಿಸಿದರು.  ಇದು ನನ್ನೊಬ್ಬನ ಆಗ್ರಹವಲ್ಲ, ಇಡೀ ಸಮಾಜದ ಆಗ್ರಹವಾಗಿದೆ ಎಂದು ಅವರು ಹೇಳಿದರು.

Write A Comment