ಕರ್ನಾಟಕ

ಚಿನ್ನವೆಂದು ನಂಬಿಸಿ ವಂಚನೆ ಇಬ್ಬರ ಸೆರೆ : ತಾಮ್ರ ವಶ

Pinterest LinkedIn Tumblr

goldಬೆಂಗಳೂರು, ಸೆ.21-ತಾಮ್ರದ ಗಟ್ಟಿಯನ್ನು ಚಿನ್ನದ ಬಿಸ್ಕೆಟ್ ಎಂದು ನಂಬಿಸಿ ವಂಚಿಸುತ್ತಿದ್ದ ರಾಜಸ್ಥಾನದ ಇಬ್ಬರನ್ನು ಸಿಸಿಬಿ ಪೊಲೀಸರು ಬಂಧಿಸಿ 13 ಲಕ್ಷ ರೂ. ಮೌಲ್ಯದ 1370 ಗ್ರಾಂ ತೂಕದ ತಾಮ್ರದ ಗಟ್ಟಿಗಳನ್ನು ವಶಪಡಿಸಿಕೊಂಡಿದ್ದಾರೆ.

ಮೂಲತಃ ರಾಜಸ್ಥಾನದವ ರಾದ ಹೆಸರಘಟ್ಟ ರಸ್ತೆ ಮುದ್ದಿನಪಾಳ್ಯ ನಿವಾಸಿ ನಾತುರಾಮ್ (25) ಮತ್ತು ಪವನ್‌ರಾಮ್ (20) ಬಂಧಿತ ವಂಚಕರು.

ಎಸ್.ಪಿ.ರಸ್ತೆಯಲ್ಲಿ ತಾಮ್ರದ ಗಟ್ಟಿಗಳನ್ನು ಖರೀದಿಸಿ 2 ತಿಂಗಳಿನಿಂದ ಸಾರ್ವಜನಿಕರಿಗೆ ಚಿನ್ನವೆಂದು ನಂಬಿಸಿ ಹೆಚ್ಚಿನ ಬೆಲೆಗೆ ಮಾರುತ್ತಿದ್ದರೆಂದು ವಿಚಾರಣೆಯಿಂದ ಗೊತ್ತಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಸಂಬಂಧ ಸೋಲದೇವನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Write A Comment