ಕರ್ನಾಟಕ

ಹುಡುಗನನ್ನು ಅಪಹರಿಸಿ ಮದುವೆಯಾದ ಹುಡುಗಿ ! ಮದುವೆಗೆ ಒಪ್ಪದಿದ್ದಾಗ ಚೂರಿ ತೋರಿಸಿದಳು

Pinterest LinkedIn Tumblr

hunting-knife

ಚಿಕ್ಕೋಡಿ, ಸೆ.21: ಸಾಮಾನ್ಯವಾಗಿ ಹುಡುಗಿಯರನ್ನು ಮದುವೆಗಾಗಿ ಅಪಹರಿಸಿಕೊಂಡು ಹೋಗುವುದನ್ನು ನೋಡಿದ್ದೇವೆ. ಆದರೆ ಹುಡುಗಿಯೇ ಹುಡಗನನ್ನು ಎತ್ತಿಕೊಂಡು ಹೋಗಿ ಮದುವೆಯಾಗಿರುವ ಅಪರೂಪದ ಘಟನೆ ಬೆಳಗಾವಿ ಜಿಲ್ಲೆಯ ರಾಯಬಾಗ ಪಟ್ಟಣದಲ್ಲಿ ನಡೆದಿದೆ.

ರಾಯಬಾಗ ಪಟ್ಟಣದ ನಿವಾಸಿ ನಾರಾಯಣರಾಮಪ್ಪಾ ಧರ್ಮಟ್ಟಿ ಎಂಬಾತನನ್ನು ಪ್ರತಿಭಾ ಸಿದ್ದಪ್ಪಾ ಗವನಾಳೆ ಎಂಬ ಯುವತಿ ತನ್ನ ಸಹಚರರೊಂದಿಗೆ ಸೇರಿ ಅಪಹರಣ ಮಾಡಿಕೊಂಡು ಹೋಗಿದ್ದಾಳೆ ಎನ್ನಲಾಗಿದೆ. ಬಲವಂತವಾಗಿ ಕರೆದು ಆತನ ಮೇಲೆ ಹಲ್ಲೆ ನಡೆಸಿದ್ದಾಳೆ. ಜೊತೆಗೆ ರಾಯಬಾಗ ತಾಲೂಕಿನ ಜೋಡಟ್ಟಿ ಗ್ರಾಮದ ದೇವಸ್ಥಾನದಲ್ಲಿ ಮದುವೆ ಮಾಡಿಕೊಂಡಿದ್ದಾಳೆ ಎನ್ನಲಾಗಿದೆ.

ಇದಕ್ಕೂ ಮುನ್ನ ಈತ ಬಾರದೇ ಇದ್ದಾಗ ಚೂರಿ ತೋರಿಸಿ ಹೆದರಿಸಿದ್ದಾಳೆ. ಬರಲು ಒಪ್ಪದಿದ್ದರೆ ಕೊಲ್ಲುವುದಾಗಿ ಯುವತಿ ಬೆದರಿಕೆ ಹಾಕಿದ್ದಾಳೆ ಎನ್ನಲಾಗಿದೆ. ಇನ್ನು ಇದೆ ರೀತಿ ಮದುವೆ ಮಾಡಿಕೊಂಡು ಹಲವು ಜನರಿಂದ ಈಕೆ ದುಡ್ಡು ಕಿತ್ತುಕೊಂಡಿದ್ದಾಳೆ. ಬಲವಂತದ ಮದುವೆಯ ವಿಡಿಯೋ ಚಿತ್ರೀಕರಿಸಿಕೊಂಡು ಬೆದರಿಕೆ ಒಡ್ಡುತ್ತಿರುವುದಾಗಿ ನಾರಾಯಣ ದೂರು ನೀಡಿದ್ದಾರೆ.

ಈ ಕುರಿತು ಪ್ರತಿಭಾಳನ್ನು ಮಾಧ್ಯಮದವರು ಕೇಳಿದಾಗ, ನಾರಾಯಣ ಒತ್ತಾಯ ಪೂರ್ವಕವಾಗಿ ತನ್ನನ್ನು ಮದುವೆ ಮಾಡಿಕೊಂಡಿದ್ದಾನೆ ಎಂದು ಉಲ್ಟಾ ಹೊಡೆದಿದ್ದಾಳೆ. ಇನ್ನು ದೂರು ದಾಖಲಿಸಿಕೊಂಡಿರುವ ರಾಯಬಾಗ ಪೊಲೀಸರು ಪ್ರಕರಣದ ಸತ್ಯವನ್ನು ಆದಷ್ಟು ಬೇಗ ಹೊರ ತರಬೇಕಿದೆ.

Write A Comment