ಕರ್ನಾಟಕ

ಈಜಲು ಹೋದ ಸಹೋದರರನ್ನು ಕರೆದೊಯ್ದ ಸಾವು

Pinterest LinkedIn Tumblr

swimಚೇಳೂರು/ತುಮಕೂರು, ಸೆ.18-ಈಜಲು ಹೋದ ಸಹೋದರರಿಬ್ಬರು ಕೆರೆಯಲ್ಲಿ ಮುಳುಗಿ ಜಲಸಮಾಧಿಯಾಗಿರುವ ಘಟನೆ ಗುಬ್ಬಿ ತಾಲೂಕಿನ ದೊಡ್ಡಗುಣಿ ಗ್ರಾಮದಲ್ಲಿ ನಡೆದಿದೆ. ಇರ್ಫಾನ್ (23), ಮುಬಾರಕ್(19) ಮೃತಪಟ್ಟ ಸಹೋದರರು.

ಇರ್ಫಾನ್ ಗುಬ್ಬಿ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕನಾಗಿ ಕೆಲಸ ಮಾಡುತ್ತಿದ್ದು, ಮುಬಾರಕ್ ಗುಬ್ಬಿಯಲ್ಲಿ ಐಟಿಐ ವ್ಯಾಸಂಗ ಮಾಡುತ್ತಿದ್ದ ನಿನ್ನೆ ಇವರ ತಾಯಿ ಬಟ್ಟೆ ತೊಳೆಯಲು ಕೆರೆ ಹತ್ತಿರ ಹೋಗಿ ಬಟ್ಟೆಗಳನ್ನು ಅಲ್ಲಿಯೇ ಒಣಗಿ ಹಾಕಿ ಬಂದಿದ್ದರು.

ಸಂಜೆ ಚಿಕ್ಕಪ್ಪ-ದೊಡ್ಡಪ್ಪನ ಮಕ್ಕಳಾದ ಇರ್ಫಾನ್-ಮುಬಾರಕ್ ಬಟ್ಟೆ ತರಲು ಹೋಗಿ ಈಜಲು ನೀರಿಗಿಳಿದಿದ್ದು, ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಈ ಸಂಬಂಧ ಗುಬ್ಬಿ ಸಿಪಿಐ ವೆಂಕಟರಮಣಪ್ಪ, ಚೇಳೂರು ಪಿಎಸ್‌ಐ ಎಫ್.ಕೆ.ನದಾಫ್, ಗುಬ್ಬಿ ಪಿಎಸ್‌ಐ ಮಂಜುನಾಥ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮಕೈಗೊಂಡಿದ್ದಾರೆ.

Write A Comment