ತನ್ನ ಅತ್ತಿಗೆಯೊಂದಿಗೆ ಹೊಲಕ್ಕೆ ತೆರಳಿದ್ದ ಬಾಲಕನ ಮೇಲೆ ಅತ್ಯಾಚಾರ ನಡೆಸಿದ ಆಘಾತಕಾರಿ ಘಟನೆಯೊಂದು ಜೇವರ್ಗಿಯಲ್ಲಿ ನಡೆದಿದೆ.
ಇಲ್ಲಿನ ಯಡ್ರಾಮಿ ಪೊಲೀಸ್ ಠಾಣವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು ಭಾನುವಾರ ತನ್ನ ಅತ್ತಿಗೆಯಾದ ಹಮೀದಾ ಜತೆ ಈ ಬಾಲಕ ಹೊಲಕ್ಕೆ ಸೌದೆ ತರಲು ತೆರಳಿದ್ದ . ಈ ಸಮಯದಲ್ಲಿ ಅಲ್ಲಿಗೆ ಬಂದ ಕೋಣಸರಗಿ ಗ್ರಾಮದ ಶ್ರೀಶೈಲ್ ದುಂಡಪ್ಪ ಹಾಲಕನವರ್ ಎಂಬ ಸಲಿಂಗ ಕಾಮಿ ಬಾಲಕನ ಬಾಯಲ್ಲಿ ಬಟ್ಟೆ ತುರುಕಿ ಎಳೆದೊಯ್ದು ಅತ್ಯಾಚಾರವೆಸಗಿ ಪರಾರಿಯಾಗಿದ್ದಾನೆ.
ಈ ಕುರಿತು ಯಡ್ರಾಮ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು ಪ್ರಕರಣ ದಾಖಲಿಸಿಕೊಂಡ ಪೊಲೀಸರು ವಿಕೃತ ಕಾಮಿ ಶ್ರೀಶೈಲ್ ನ ಪತ್ತೆ ಕಾರ್ಯ ಕೈಗೊಂಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.