ಅರಕಲಗೂಡು,ಜು.23- ಅನಾರೋಗ್ಯಕ್ಕೀಡಾಗಿ ಮೃತಪಟ್ಟ ರೈತನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಕುರಿತು ಸುಳ್ಳು ಮಾಹಿತಿಯ ಹಿನ್ನೆಲೆಯಲ್ಲಿ ತಾಲೂಕಿನ ವಿಜಾಪುರ ಒಂದನೇ ಕಾಲೋನಿಗೆ ಕಂದಾಯ ಇಲಾಖೆ ಅಧಿಕಾರಿಗಳು ಮತ್ತು ಪೊಲೀಸರು ಭೇಟಿ ನೀಡಿ ಮುಜುಗರಕ್ಕೀಡಾದ ಪ್ರಸಂಗ ನಡೆಯಿತು.
ಗ್ರಾಮದ ತಿಮ್ಮೇಗೌಡ (54) ಎಂಬುವವರು ಕೆಲ ದಿನಗಳಿಂದ ಅನಾರೋಗ್ಯದ ಪರಿಣಾಮ ಹಾಸಿಗೆ ಹಿಡಿದು ಮೃತಪಟ್ಟಿದ್ದಾರೆ.
ರೈತ ಆತ್ಮಹತ್ಯೆ ಮಾಡಿಕೊಂಡರೆ ಪರಿಹಾರ ಪಡೆಯಬಹುದೆಂದು ಕೆಲ ಸ್ಥಳೀಯರು ಮೃತರ ಕುಟುಂಬದ ಸದಸ್ಯರು ಪೊಲೀಸರಿಗೆ ನೀಡಿದ ಮಾಹಿತಿ ಮೇರೆಗೆ ಗ್ರಾಮಕ್ಕೆ ಭೇಟಿ ನೀಡಿದಾಗ ವಾಸ್ತವ ಸ್ಥಿತಿ ಗೊತ್ತಾಗಿದೆ.