ಕರ್ನಾಟಕ

ಚಿಕ್ಕಮಗಳೂರು: ದರ್ಗಾದಲ್ಲಿ ಹಂದಿಯ ತಲೆ ಇಟ್ಟ ಕಿಡಿಗೇಡಿಗಳು

Pinterest LinkedIn Tumblr

head-pig

ಚಿಕ್ಕಮಗಳೂರು, ಜು.19: ಈದುಲ್ ಫಿತ್ರ್ ರಾತ್ರಿ ದರ್ಗಾವೊಂದರಲ್ಲಿ ಕಿಡಿಗೇಡಿ ಗಳು ಹಂದಿಯ ತಲೆ ಇಟ್ಟ ಕಾರಣ ನಗರದಲ್ಲಿ ಬಿಗುವಿನ ವಾತಾವರಣ ಮೂಡಿತ್ತಾದರೂ, ಹಿರಿಯರ ಮಧ್ಯಸ್ಥಿಕೆ ಹಾಗೂ ಪೊಲೀಸರ ಸಮಯಪ್ರಜ್ಞೆಯಿಂದ ಪರಿಸ್ಥಿತಿ ತಣ್ಣಗಾಗಿದೆ.

ನಗರದ ಉಪ್ಪಳ್ಳಿ ಬಡಾವಣೆಯ ಬಳಿಯ ಪಾಂಚ್ ಪೀರ್ ಮಕಾನ್ ಹೆಸರಿನಿಂದ ಕರೆಯಲ್ಪಡುವ ದರ್ಗಾದ ಒಳಾವರಣದಲ್ಲಿ ಕಿಡಿಗೇಡಿಗಳು ಹಂದಿಯ ತಲೆ ಇಟ್ಟಿರುವುದು ಕಂಡು ಬಂದಿತ್ತು. ಈದುಲ್ ಫಿತ್ರ್ ದಿನವಾದ ಹಿನ್ನೆಲೆಯಲ್ಲಿ ಶಾಂತಿ ಕದಡದಂತೆ ಮುನ್ನೆಚ್ಚರಿಕೆ ವಹಿಸಿದ್ದ ಪೊಲೀಸ್ ಇಲಾಖೆ ತಕ್ಷಣವೇ ಕೆಲವು ಸಂಘಟನೆಗಳ ಹಾಗೂ ಜಮಾಅತ್ ಮುಖಂಡರ ಸಮ್ಮುಖದಲ್ಲಿ ಅದನ್ನು ತೆರವುಗೊಳಿಸಿತ್ತು.

ಪರಿಸ್ಥಿತಿಯ ಗಂಭೀರತೆ ಮನ ವರಿಕೆಯಾಗುತ್ತಿದ್ದಂತೆ ಹಿರಿಯರ ಮಧ್ಯಸ್ಥಿಕೆಯಿಂದ ಹಾಗೂ ದುಷ್ಕರ್ಮಿ ಗಳನ್ನು ಪತ್ತೆ ಹಚ್ಚಿ ಕಠಿಣ ಕ್ರಮ ಜರಗಿಸುವ ಭರವಸೆಯನ್ನು ಪೊಲೀಸರು ನೀಡಿದ್ದರಿಂದ ಪ್ರತಿಭಟನೆಯನ್ನು ಕೈಬಿಡಲಾಯಿತು. ಇದೀಗ ಸ್ಥಳದಲ್ಲಿ ಶಾಂತಿಯ ವಾತಾವರಣ ನೆಲೆಸಿದೆ. ಆರೋಪಿಗಳ ಬಂಧನಕ್ಕೆ ವಿಶೇಷ ತಂಡವೊಂದನ್ನು ರಚಿಸಲಾಗುವುದು. ಸಾರ್ವಜನಿಕರು ಯಾವುದೇ ವದಂತಿ ಗಳಿಗೆ ಕಿವಿಗೊಡಬಾರದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಂತೋಷ್ ಬಾಬು ಸುದ್ದಿಗೋಷ್ಠಿಯಲ್ಲಿ ಮನವಿ ಮಾಡಿದ್ದಾರೆ.

Write A Comment