ಕರ್ನಾಟಕ

ರಾಘವೇಶ್ವರ ಶ್ರೀಗಳ ವಿರುದ್ಧ ಅತ್ಯಾಚಾರ ಆರೋಪ ಪ್ರಕರಣ; ಸಿಐಡಿ ಅಧಿಕಾರಿಗಳ ತಂಡದಿಂದ ಹುಬ್ಬಳ್ಳಿಯಲ್ಲಿ ತನಿಖೆ

Pinterest LinkedIn Tumblr

10Fir16-17-Running.qxp

ಹುಬ್ಬಳ್ಳಿ: ರಾಘವೇಶ್ವರ ಶ್ರೀಗಳ ವಿರುದ್ಧ ಅತ್ಯಾಚಾರ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ಅಧಿಕಾರಿಗಳ ತಂಡ ಹುಬ್ಬಳ್ಳಿಯಲ್ಲಿ ತನಿಖೆ ನಡೆಸಿದೆ.

ಸಿಐಡಿ ಡಿವೈಎಸ್ಪಿ ಪುರುಷೋತ್ತಮ ಚಂದ್ರಶೇಖರ ನೇತೃತ್ವದ ತಂಡ ಪ್ರೇಮಲತಾ ದಿವಾಕರ್ ಜತೆ ಇಲ್ಲಿನ ಮಂಜುನಾಥ್ ನಗರಕ್ಕೆ ಭೇಟಿ ನೀಡಿತು. 2013 ರಲ್ಲಿ ಮಂಜುನಾಥ ನಗರದ ರಾಘವೇಂದ್ರ ದೇವಸ್ಥಾನದಲ್ಲಿ ರಾಮಕಥಾ ಆಯೋಜಿಸಲಾಗಿತ್ತು. ಈ ವೇಳೆ ರಾಘವೇಶ್ವರ ಶ್ರೀಗಳು ಇಲ್ಲಿನಮನೆಯೊಂದರಲ್ಲಿ ವಾಸವಾಗಿದ್ದರು. ಪ್ರೇಮಲತಾ ದಿವಾಕರ್ ಸಹ ಇಲ್ಲಿಯೇ ಉಳಿದುಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಸಿಐಡಿ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಪ್ರೇಮಲತಾ, ರಾಘವೇಶ್ವರ ಶ್ರೀಗಳು ತಮ್ಮನ್ನು ಸಮಾಜದಿಂದ ಬಹಿಷ್ಕಾರ ಹಾಕುವ ಪಿತೂರಿ ನಡೆಸಿದ್ದಾರೆ ಎಂದು ಆರೋಪಿಸಿದರು. ಸಿಐಡಿ ಅಧಿಕಾರಿಗಳು ಕ್ರಮಬದ್ಧವಾಗಿ ತನಿಖೆ ಮಾಡುತ್ತಿದ್ದಾರಾದರೂ ವಿಳಂಬ ಮಾಡುತ್ತಿದ್ದಾರೆ. ಏಕೆ ಎಂದು ತಿಳಿಯುತ್ತಿಲ್ಲ. ಮಾಹಿತಿ ಪ್ರಕಾರ ಅಧಿಕಾರಿಗಳ ಮೇಲೆಯೂ ಒತ್ತಡ ತರಲಾಗುತ್ತಿದೆ ಎಂದು ಪ್ರೇಮಲತಾ ಪತಿ ದಿವಾಕರ್ ಹೇಳಿದ್ದಾರೆ.

Write A Comment