ಬೆಂಗಳೂರು: ಕುಟುಂಬದ ಇಚ್ಚೆಗೆ ವಿರುದ್ಧವಾಗಿ ಜೊತೆಯಲ್ಲಿ ನೆಲೆಸಿದ್ದ ಯುವ ಜೋಡಿಯೊಂದರ ಮರ್ಯಾದೆ ಹತ್ಯೆ ನಡೆಸಿದ್ದ ಆರೋಪಿ ಹನುಮಂತನನ್ನು(ಬೆಂಗಳೂರಲ್ಲಿ ಮರ್ಯಾದೆ ಹತ್ಯೆ;ಯುವತಿ ಸೋದರನಿಂದಲೇ ಇಬ್ಬರ ಕೊಲೆ) ಕೊನೆಗೂ ಬೆಂಗಳೂರು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಅಂತರ್ಜಾತಿ ವಿವಾಹವಾಗಿದ್ದಕ್ಕೆ ತಂಗಿ ಹಾಗೂ ಪ್ರಿಯಕರ ಬಸವರಾಜುವನ್ನು ಹನುಮಂತ ಚೂರಿಯಿಂದ ಇರಿದು ಹತ್ಯೆಗೈದು ಪರಾರಿಯಾಗಿದ್ದ. ಇದೀಗ ಹನುಮಂತನನ್ನು ಸೋಮವಾರ ಬಂಧಿಸಿ, ವಿಚಾರಣೆ ನಡೆಸುತ್ತಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಅನ್ಯಜಾತಿಯ ಯುವಕನನ್ನು ಪ್ರೀತಿಸಿದ್ದಕ್ಕೆ ಯುವತಿಯ ಸೋದರ ಹನುಮಂತ ಪ್ರೇಮಿಗಳಿಬ್ಬರನ್ನು ಭೀಕರವಾಗಿ ಇರಿದು ಕೊಲೆ ಮಾಡಿದ್ದ.
ಬೆಂಗಳೂರಿನ ಹೊರವಲಯದ ಹೆಸರುಘಟ್ಟದಲ್ಲಿ ಘಟನೆ ನಡೆದಿತ್ತು. ಬಸವರಾಜು(28) ಹಾಗೂ ಕಸ್ತೂರಿ ಅಲಿಯಾಸ್ ರೂಪಾ(25) ಹತ್ಯೆಯಾದವರು. ಈ ಕೃತ್ಯವನ್ನು ರೂಪಾಳ ಸಹೋದರ ಹನುಮಂತ ನಡೆಸಿದ್ದ.
-ಉದಯವಾಣಿ