ಕರ್ನಾಟಕ

ಗುಂಡಿನ ಮತ್ತು ಯುವಕನ ಜೀವಕ್ಕೆ ಕುತ್ತು; ಸ್ನೇಹಿತರ ಜಗಳದಲ್ಲಿ ಚೂರಿ ಇರಿತಕ್ಕೊಳಗಾದ ಯುವಕ ಬಲಿ

Pinterest LinkedIn Tumblr

kneif'

ಬೆಂಗಳೂರು, ಜು.6: ಸೋಲದೇವನಹಳ್ಳಿಯ ಬಾರೊಂದರ ಬಳಿ ಕಂಠಪೂರ್ತಿ ಕುಡಿದು ಏಳೆಂಟು ಮಂದಿ ಸ್ನೇಹಿತರು ಮಾಡಿಕೊಂಡ ಜಗಳ ಮಾರಾಮಾರಿಯಲ್ಲಿ ಚಾಕುವಿನಿಂದ ಇರಿತಕ್ಕೊಳಗಾಗಿ ತೀವ್ರವಾಗಿ ಗಾಯಗೊಂಡ ಯುವಕನೋರ್ವ ಇಂದು ಬೆಳಗ್ಗೆ ಮೃತಪಟ್ಟಿದ್ದಾನೆ

.
ಮಾದನಾಯಕನಹಳ್ಳಿಯ ಜೆಸಿಬಿ ಮಾಲೀಕ ರಾಜೇಂದ್ರ (28) ಕೊಲೆಯಾದ ಯುವಕನಾಗಿದ್ದಾನೆ. ಕಳೆದ ಜು.4ರಂದು ಹೆಸರುಘಟ್ಟ ರಸ್ತೆಯ ಅನುಪಮ ಬಾರ್‍ನಲ್ಲಿ ರಾಜೇಂದ್ರ ಹಾಗೂ ಆತನ ಏಳೆಂಟು ಮಂದಿ ಸ್ನೇಹಿತರು ಪಾರ್ಟಿ ಮಾಡಿ ಕಂಠಪೂರ್ತಿ ಕುಡಿದಿದ್ದರು.

ಸಂಜೆ ಏಳರಿಂದ ರಾತ್ರಿ 11ರವರೆಗೆ ಕುಡಿದಿದ್ದ ಇವರೆಲ್ಲ ಬಾರ್‍ನಿಂದ ಹೊರಗಡೆ ಬಂದು ಕ್ಷುಲ್ಲಕ ಕಾರಣಕ್ಕೆ ಜಗಳ ಮಾಡಿಕೊಂಡಿದ್ದಾರೆ.

ಜಗಳ ವಿಕೋಪಕ್ಕೆ ತಿರುಗಿದಾಗ ರಾಜೇಂದ್ರನ ಹೊಟ್ಟೆಗೆ ಚಾಕುವಿನಿಂದ ಇರಿದಿದ್ದ ಸ್ನೇಹಿತರು ಆತನ ಜೊತೆಗಿದ್ದ ಅಭಿಷೇಕ್ ಮೇಲೆ ಹಲ್ಲೆ ಮಾಡಿದ್ದರು. ಗಾಯಗೊಂಡ ರಾಜೇಂದ್ರನನ್ನು ಸಪ್ತಗಿರಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಇಂದು ಬೆಳಗ್ಗೆ ಮೃತಪಟ್ಟಿದ್ದಾನೆ.

ಹಲ್ಲೆಗೊಳಗಾಗಿದ್ದ ಅಭಿಷೇಕ್ ಚಿಕಿತ್ಸೆ ಪಡೆದು ಮನೆಗೆ ತೆರಳಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಸೋಲದೇವನಹಳ್ಳಿ ಪೊಲೀಸರು ಇಬ್ಬರು ಸ್ನೇಹಿತರನ್ನು ವಶಕ್ಕೆ ಪಡೆದು ಮುಂದಿನ ಕ್ರಮ ಕೈಗೊಂಡಿದ್ದಾರೆ ಎಂದು ಡಿಸಿಪಿ ಸುರೇಶ್ ತಿಳಿಸಿದ್ದಾರೆ.

Write A Comment