ಕರ್ನಾಟಕ

ಶಾಲಾ ಮಕ್ಕಳಿಂದ ಕಾಲು ಒತ್ತಿಸಿಕೊಂಡ ಶಿಕ್ಷಕಿ !

Pinterest LinkedIn Tumblr

scooಬಳ್ಳಾರಿ: ಶಾಲಾ ಮಕ್ಕಳಿಂದ ತಮ್ಮ ವೈಯಕ್ತಿಕ ಕೆಲಸಗಳನ್ನು ಮಾಡಿಸಿಕೊಳ್ಳುವ ಆನೇಕ ಶಿಕ್ಷಕರಿದ್ದಾರೆ. ಆದರೆ ಇಲ್ಲೊಬ್ಬ ಶಿಕ್ಷಕಿ ಶಾಲೆಯಲ್ಲಿಯೇ ಮಕ್ಕಳಿಂದ ಕೈ ಕಾಲು ಒತ್ತಿಸಿಕೊಂಡು ಸುದ್ದಿಯಾಗಿದ್ದಾರೆ.

ಬಳ್ಳಾರಿಯ ಕರಿಮಾರಮ್ಮ ಕಾಲೋನಿ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕಿ ರಾಜಲಕ್ಷ್ಮೀ ಮಕ್ಕಳಿಂದ ಕೈ ಕಾಲು ಒತ್ತಿಸಿಕೊಂಡ ಕಾರಣ ಪೋಷಕರಿಂದ ಪ್ರತಿಭಟನೆ ಎದುರಿಸಬೇಕಾಯಿತಲ್ಲದೇ ಪ್ರತಿಭಟನಾಕಾರರ ಒತ್ತಡಕ್ಕೆ ಮಣಿದ ಕ್ಷೇತ್ರ ಶಿಕ್ಷಣಾಧಿಕಾರಿಗಳು ಈ ಶಿಕ್ಷಕಿಯನ್ನು ಮತ್ತೊಂದು ಶಾಲೆಗೆ ವರ್ಗಾವಣೆ ಮಾಡಿದ್ದಾರೆ.

ಶಾಲೆಯ ಮುಂದೆ ಪೋಷಕರು ಪ್ರತಿಭಟನೆ ನಡೆಸುತ್ತಿದ್ದ ವೇಳೆ ಸ್ಥಳಕ್ಕಾಗಮಿಸಿದ್ದ ಕ್ಷೇತ್ರ ಶಿಕ್ಷಣಾಧಿಕಾರಿ ಅಶೋಕ್, ಶಿಕ್ಷಕಿಯ ಆರೋಗ್ಯ ಸರಿಯಿಲ್ಲದ ಕಾರಣಕ್ಕೆ ಈ ರೀತಿ ಮಾಡಿರಬಹುದೆಂದು ಸಮಜಾಯಿಷಿ ನೀಡಲು ಮುಂದಾದಾಗ ಪೋಷಕರ ತೀವ್ರ ಅಕ್ರೋಶಕ್ಕೆ ಗುರಿಯಾಗಬೇಕಾಗಿ ಬಂದಿದೆ. ಈ ಶಿಕ್ಷಕಿ ತಮ್ಮ ಮಕ್ಕಳನ್ನು ಅವರ ವೈಯಕ್ತಿಕ ಕೆಲಸಗಳಿಗೆ ಬಳಸಿಕೊಳ್ಳುತ್ತಿರುವ ಕಾರಣ ಅವರನ್ನು ವರ್ಗಾವಣೆ ಮಾಡಿ ಎಂದು ಪೋಷಕರು ಪಟ್ಟು ಹಿಡಿದ ವೇಳೆ ಶಿಕ್ಷಕಿ ರಾಜಲಕ್ಷ್ಮೀಯವರನ್ನು ಇದೀಗ ಪಾರ್ವತಿ ನಗರದ ಸರ್ಕಾರಿ ಶಾಲೆಗೆ ವರ್ಗಾವಣೆ ಮಾಡಿದ್ದಾರೆ.

Write A Comment