ಕರ್ನಾಟಕ

ಕಾರೊಳಗೆ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ

Pinterest LinkedIn Tumblr

9073car-suicide

ಕಾರಿನೊಳಗೆ ಕುಳಿತು ಡೋರ್ ಲಾಕ್ ಮಾಡಿ ಬೆಂಕಿ ಹಚ್ಚಿಕೊಂಡು ವ್ಯಕ್ತಿಯೊಬ್ಬ ಆತ್ಮಹತ್ಯೆಗೆ ಶರಣಾದ ಘಟನೆ ಬೆಂಗಳೂರಿನ ಹೊರವಲಯದ ಕೆಂಗೇರಿಯಲ್ಲಿ ನಡೆದಿದೆ.

ಮಾರುತಿ 800 ನಲ್ಲಿ ಕುಳಿತು ಅದರ ದಾಖಲೆಗಳನ್ನು ಬದಿಗಿಟ್ಟು ಬೆಂಕಿ ಹಚ್ಚಿಕೊಂಡಿದ್ದಾನೆ ಎನ್ನಲಾಗಿದ್ದು ಆತ್ಮಹತ್ಯೆಗೆ ಕಾರಣವೇನೆಂಬುದು ತಿಳಿದುಬಂದಿಲ್ಲ. ಮೃತನನ್ನು ಶಿವಶಂಕರ್ ಹೆಬ್ಬಾರ್ ಎಂದು ಗುರುತಿಸಲಾಗಿದ್ದು, ಆತ್ಮಹತ್ಯೆಗೆ ಶರಣಾದ ಶಿವಶಂಕರ್ ಅವರನ್ನು ಕೆಂಗೇರಿಯ ಸ್ಯಾಟಲೈಟ್ ಕ್ಲಬ್ ಬಳಿಯ ಜ್ಞಾನಭಾರತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಜ್ಯೋತಿನಗರ ಬಡಾವಣೆ ನಿವಾಸಿ ಎನ್ನಲಾಗಿದೆ.

ಈ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ ಎಂಬ ಮಾಹಿತಿ ದೊರೆತಿದೆ.

Write A Comment