ಕರ್ನಾಟಕ

ಮೈಸೂರಿನಲ್ಲಿ ಮಹಿಳಾ ಎಂಜಿನಿಯರ್ ರೊಬ್ಬರ ಬಲಿ ಪಡೆದ ‘ವಾಟ್ಸ್‌ಆಪ್‌’ ಮೆಸೇಜ್; ಅನಾಮಧೇಯ ಮೆಸೇಜ್‌ನಿಂದ ದಂಪತಿ ನಡುವೆ ವಿರಸ; ಆತ್ಮಹತ್ಯೆಯಲ್ಲಿ ಅಂತ್ಯ

Pinterest LinkedIn Tumblr

navyashree

ಮೈಸೂರು, ಜೂ.24: ಅನಾಮಧೇಯ ಮೆಸೇಜ್‌ನಿಂದ ದಂಪತಿ ನಡುವೆ ಜಗಳವಾಗಿ ಮನನೊಂದು ಕೆಇಬಿ ಮಹಿಳಾ ಇಂಜಿನಿಯರ್ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಂಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಲಕನಗರದ ನಿವಾಸಿ ನವ್ಯಶ್ರೀ (24) ಆತ್ಮಹತ್ಯೆ ಮಾಡಿಕೊಂಡ ಕೆಇಬಿ ಇಂಜಿನಿಯರ್.

ನವ್ಯಶ್ರೀ ಕೆ.ಆರ್.ಪೇಟೆಯ ಸೆಸ್ಕಾಂನಲ್ಲಿ ಎಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಇವರು ಕಳೆದ 14 ತಿಂಗಳು ಹಿಂದಷ್ಟೇ ನಗರದ ಸಿಎಫ್‌ಪಿಆರ್‌ಐನಲ್ಲಿ ಪಿಎಚ್‌ಡಿ ಸಂಶೋಧನೆ ನಡೆಸುತ್ತಿದ್ದ ರೂಪೇಶ್‌ನೊಂದಿಗೆ ವಿವಾಹವಾಗಿದ್ದರು. ಮೊನ್ನೆ ಸಂಜೆ ನವ್ಯಶ್ರೀ ಮೊಬೈಲ್‌ನಲ್ಲಿ ರೂಪೇಶ್ ಗೇಮ್ ಆಡುತ್ತಿದ್ದಾಗ ನವ್ಯಶ್ರೀ ಮೊಬೈಲ್‌ಗೆ ಅನಾಮಧೇಯನಿಂದ ಸಂದೇಶವೊಂದು ವಾಟ್ಸ್‌ಆಪ್‌ಗೆ ಬಂದಿದೆ. ಇದರಿಂದ ಅನುಮಾನಗೊಂಡ ರೂಪೇಶ್ ಆಕೆಯನ್ನು ಪ್ರಶ್ನಿಸಿದಾಗ, ನನಗೂ ಆ ಸಂದೇಶಕ್ಕೂ ಯಾವುದೇ ಸಂಬಂಧವಿಲ್ಲ ಎಂದು ನವ್ಯಶ್ರೀ ಹೇಳಿದರೂ ರೂಪೇಶ್ ಸುಮ್ಮನಾಗಲಿಲ್ಲ.

ಇದರಿಂದಾಗಿ ಇಬ್ಬರ ನಡುವೆ ಜಗಳವಾಗಿದ್ದು, ರೂಪೇಶ್ ನವ್ಯಶ್ರೀ ಜೊತೆ ಮಾತನಾಡುವುದನ್ನು ನಿಲ್ಲಿಸಿದ್ದರು. ಇದರಿಂದ ಮನನೊಂದ ನವ್ಯಶ್ರೀ ನಿನ್ನೆ ಕೆಲಸದಿಂದ ಮನೆಗೆ ಬಂದು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಶವವನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

Write A Comment