ಕರ್ನಾಟಕ

ನರೇಂದ್ರ ಮೋದಿಗೆ ಕಂಟಕ ತಪ್ಪಿದ್ದಲ್ಲ : ಕೋಡಿ ಮಠ ಶ್ರೀಗಳ ಭವಿಷ್ಯ

Pinterest LinkedIn Tumblr

kodi

ಧಾರವಾಡ:   ಹಲವು ಭವಿಷ್ಯಗಳನ್ನು ನಿಖರವಾಗಿ ಹೇಳುವ ಮೂಲಕವೇ ಪ್ರಸಿದ್ದಿ ಪಡೆದಿದ್ದ ಕೋಡಿ ಮಠದ ಶ್ರೀ ಶಿವಾನಂದ ಶಿವಯೋಗಿ ರಾಜ ಯೋಗೇಂದ್ರ ಮಹಾ ಸ್ವಾಮೀಜಿ
ಪ್ರಧಾನಿ ನರೇಂದ್ರ ಮೋದಿಗೆ ಕಂಟಕ ತಪ್ಪಿದ್ದಲ್ಲ ಎಂದು  ಭವಿಷ್ಯ ನುಡಿದಿದ್ದಾರೆ.

ಲಲಿತ್ ಮೋದಿಗೆ ಸುಷ್ಮಾ ಸ್ವರಾಜ್ ನೆರವು ಪ್ರಕರಣಕ್ಕೆ ಸಂಬಂಧಿಸಿದಂತೆ ನಡೆಯುವ ಹಾದಿ ಮೂರು ಭಾಗವಾದೀತು. ಸಿದ್ದರಾಮಯ್ಯ ಸರ್ಕಾರಕ್ಕೆ ಸದ್ಯಕ್ಕೆ ಯಾವುದೇ ತೊಂದರೆಯಿಲ್ಲ. ಈ ಬಾರಿ ದೇಶದಲ್ಲಿ ಅನಾಹುತ ಸಂಭವಿಸಲಿದೆ ಎಂದು ಶ್ರೀಗಳು ಹೇಳಿದ್ದಾರೆ.

ಉತ್ತರ ಭಾರತದಲ್ಲಿ ದೊಡ್ಡ ಆಘಾತದ ಲಕ್ಷಣ ಕಂಡುಬಂದಿದೆ. ಈ ಬಾರಿ ರಾಜ್ಯದಲ್ಲಿ ಉತ್ತಮ ಮಳೆ, ಬೆಳೆ ಆಗುತ್ತದೆ. ಆದರೆ ದೇಶದಲ್ಲಿ ವರುಣನಿಂದ ಹಾನಿ ಕಂಡುಬಂದಿದೆ ಎಂದು ಬಾಗಲಕೋಟೆಯಲ್ಲಿ ಕೋಡಿಮಠ ಶ್ರೀಗಳು ಭವಿಷ್ಯ ನುಡಿದಿದ್ದಾರೆ.

Write A Comment