ಕೋಲಾರ/ತುಮಕೂರು: ಮೂರು ತಿಂಗಳ ಹಿಂದೆ ನಿಗೂಢವಾಗಿ ಸಾವಿಗೀಡಾದ ಐಎಎಸ್ ಅಧಿಕಾರಿ ಡಿ.ಕೆ. ರವಿ ಅವರಿಗೆ ಬುಧವಾರ 36ನೇ ಜನ್ಮದಿನ. ಈ ನಿಮಿತ್ತ ಕೋಲಾರ ಹಾಗೂ ತುಮಕೂರು ಜಿಲ್ಲೆಗಳಲ್ಲಿ ರವಿ ಅಭಿಮಾನಿಗಳು ಅವರ ಹುಟ್ಟುಹಬ್ಬ ಆಚರಿಸಿದರು. ರಕ್ತದಾನ, ಅನ್ನಸಂತರ್ಪಣೆ ಸೇರಿದಂತೆ ವಿವಿಧ ಕಾರ್ಯಕ್ರಮಗಳು ನಡೆದವು. ಕೋಲಾರ ಜಿಲ್ಲೆ ಕೆಂಬೋಡಿಯಲ್ಲಿ ರವಿ ತಾಯಿ ಗೌರಮ್ಮ, ತಂದೆ ಕರಿಯಪ್ಪ ಅವರನ್ನು ಗ್ರಾಮಸ್ಥರು ಸನ್ಮಾನಿಸಿದರು. ರವಿ ಅವರ ಸೇವೆ ನೆನೆದು ಅಭಿಮಾನಿಗಳು ಕಣ್ಣೀರು ಇಟ್ಟರು.
7 ವರ್ಷದ ಬಾಲಕಿ ಪಾದಯಾತ್ರೆ
ಐಎಎಸ್ ಅಧಿಕಾರಿ ಡಿ.ಕೆ.ರವಿ ಸಾವಿನ ಪ್ರಕರಣದ ತನಿಖೆಯನ್ನು ಶೀಘ್ರ ಮುಗಿಸುವಂತೆ ಆಗ್ರಹಿಸಿ ಬುಧವಾರ ರವಿ ಹುಟ್ಟೂರಾದ ತುಮಕೂರು ಜಿಲ್ಲೆಯ ದೊಡ್ಡಕೊಪ್ಪಲಿನಿಂದ ಕೋಲಾರದವರೆಗೆ ಚಿತ್ರದುರ್ಗದ ಸಾಮಾಜಿಕ ಕಾರ್ಯಕರ್ತ ಚನ್ನಕೇಶವ ಹಾಗೂ ಅವರ ಏಳು ವರ್ಷದ ಪುತ್ರಿ ಲಾವಣ್ಯ ಪಾದಯಾತ್ರೆ ನಡೆಸಿದರು.
-ಉದಯವಾಣಿ