ಕರ್ನಾಟಕ

ಹಸಿರು ರಾಜ್ಯ ನಿರ್ಮಾಣಕ್ಕೆ ತಂಡ: ನಟ ರಾಘವೇಂದ್ರ

Pinterest LinkedIn Tumblr

pvec05june15shrikrishna

ಬೆಂಗಳೂರು: ಬನಶಂಕರಿ ಮೂರನೇ ಹಂತದ ಐಟಿಐ ಬಡಾವಣೆಯ ಶ್ರೀಕೃಷ್ಣ ಪದವಿ ಕಾಲೇಜಿನಲ್ಲಿ ಮೊದಲ ಪಿಯುಸಿ ತರಗತಿಗಳ ಉದ್ಘಾಟನೆ ಹಾಗೂ ಪರಿಸರ ದಿನಾಚರಣೆ ಕಾರ್ಯಕ್ರಮ ಗುರುವಾರ ನಡೆಯಿತು.

ನಟ ರಾಘವೇಂದ್ರ ರಾಜ್‌ ಕುಮಾರ್‌ ಮಾತನಾಡಿ, ‘ಐದು ಲಕ್ಷ ಗಿಡಗಳನ್ನು ನೆಡುವ ಮೂಲಕ ರಾಜ್ಯವನ್ನು ಹಸಿರುಮಯಗೊಳಿಸಲು ನಮ್ಮ ಕುಟುಂಬ ನಿರ್ಧರಿಸಿದೆ’ ಎಂದರು.

‘ಹಸಿರು ರಾಜ್ಯ ನಿರ್ಮಾಣಕ್ಕಾಗಿ  ಸ್ನೇಹಿತರು, ಅಭಿಮಾನಿಗಳು ಮತ್ತು ಸಾರ್ವಜನಿಕರನ್ನು ಒಳಗೊಂಡ ತಂಡ  ರಚಿಸಲಾಗುವುದು’ ಎಂದು ಅವರು ತಿಳಿಸಿದರು. ಸಾಗರ್ ಅಘೋರಿ ಗುರೂಜಿ, ಆಗಮಾಚಾರ್ಯ ಸೋಮಸುಂದರ್ ದೀಕ್ಷಿತ್ ಇದ್ದರು.

Write A Comment