ಬಳ್ಳಾರಿ: ವೃದ್ಧೆಯನ್ನು ಹೊತ್ತು ಕೊಂಡು ಬಂದು ಮತ ಚಲಾವಣೆಯನ್ನು ಮಾಡಿಸಿದ ಕಾರಣಕ್ಕೆ ಬಳ್ಳಾರಿಯ ಸಿರವಾಡ ಗ್ರಾಮದ ಮತಗಟ್ಟೆ ಎದುರು ವಾದವಿವಾದ ನಡೆಯಿತು.
ವೃದ್ಧರನ್ನು ಅವರ ಸಂಬಂಧಿಕರು, ಹತ್ತಿರದವರು ಹೊತ್ತುಕೊಂಡು ಬಂದು ಮತ ಚಲಾವಣೆಗೆ ಅನುವು ಮಾಡಿಕೊಡುವ ಸಂಗತಿಗಳೇನು ಹೊಸದಲ್ಲ. ಆದರೆ ಸಿರವಾಡ ಗ್ರಾಮ ಪಂಚಾಯತ್ ಚುನಾವಣೆಗೆ ಸ್ಪರ್ಧಿಸಿದ್ದ ಅಭ್ಯರ್ಥಿ ರಂಗಪ್ಪ ತಮ್ಮ ಊರಿನ ವೃದ್ಧೆಯೊಬ್ಬರನ್ನು ತಮ್ಮ ಪರ ಮತ ಚಲಾಯಿಸುವಂತೆ ಒತ್ತಾಯಿಸಿ ಆಕೆಯನ್ನು ಎತ್ತಿಕೊಂಡೇ ಮತಗಟ್ಟೆಯನ್ನು ಪ್ರವೇಶಿಸಿದ್ದಾನೆ.
ಇದು ಆತನ ಪ್ರತಿಸ್ಪರ್ಧಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಘಟನೆಯ ಪರಿಣಾಮ ರಂಗಪ್ಪ ಮತ್ತು ಅವರ ಬೆಂಬಲಿಗರ ನಡುವೆ ವಿವಾದ ಪ್ರಾರಂಭವಾಗಿದ್ದು ಕೈ ಕೈ ಮಿಲಾಯಿಸಿ ಹೊಡೆದಾಡುವುದಕ್ಕೂ ಮುಂದಾಗಿದ್ದಾರೆ.
ಮತಗಟ್ಟೆ ಬಳಿ ಇದ್ದ ಪೊಲೀಸರು ಪರಿಸ್ಥಿತಿಯನ್ನು ತಿಳಿಗೊಳಿಸಿದ್ದಾರೆ.