ಕರಾವಳಿ

ಕಾರ್ಕಳದಲ್ಲಿ ಆಳದ ಚರಂಡಿಗೆ ಬೈಕ್ ಬಿದ್ದು ಇಬ್ಬರು ವಿದ್ಯಾರ್ಥಿಗಳು ಸಾವು

Pinterest LinkedIn Tumblr

ಉಡುಪಿ: ಸವಾರನ ನಿಯಂತ್ರಣ ತಪ್ಪಿದ ಬೈಕೊಂದು ಗದ್ದೆಗೆ ಮಗುಚಿ ಬಿದ್ದ ಘಟನೆ ಕಾರ್ಕಳದ ಸಾಣೂರಿನಲ್ಲಿ ನಡೆದಿದೆ. ಅಪಘಾತದಲ್ಲಿ ಸುರತ್ಕಲ್ ನ ಇಬ್ಬರು ಪಿಯು ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ. ಸುದೇಶ್ ಹಾಗೂ ರಾಜೇಂದ್ರ ಮೃತ ವಿದ್ಯಾರ್ಥಿಗಳು.

5 ಬೈಕ್ ನಲ್ಲಿ 10 ವಿದ್ಯಾರ್ಥಿಗಳು ಸುರತ್ಕಲ್ ಕಡೆಯಿಂದ ಕಾರ್ಕಳಕ್ಕೆ ಬರುತ್ತಿದ್ದಾಗ ಸಾಣೂರು ಶಾಂಭವಿ ಬ್ರಿಡ್ಜ್ ಬಳಿ ಹಾದು ಹೋಗುವ ಕಾರ್ಕಳ-ಬೆಳುವಾಯಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಮೆಸ್ಟ್ರೋ ದ್ವಿಚಕ್ರ ವಾಹನವನ್ನು ಸವಾರ ಸುದೇಶ್ ಕಾರ್ಕಳ ಕಡೆಯಿಂದ ಬೆಳುವಾಯಿ ಕಡೆಗೆ ಬರುತ್ತಿರುವಾಗ ರಸ್ತೆಯ ಎಡ ಬದಿಯಲ್ಲಿದ್ದ ತುಂಡಾದ ವಿದ್ಯುತ್ ಕಂಬದ ಬುಡಕ್ಕೆ ಢಿಕ್ಕಿ ಹೊಡೆದು ದ್ವಿಚಕ್ರ ವಾಹನ ಸಮೇತ ಸವಾರ ಮತ್ತು ಸಹಸವಾರ ಡಾಮಾರು ರಸ್ತೆಯಿಂದ ಸುಮಾರು 40 ಅಡಿ ಕೆಳಕ್ಕೆ ಚರಂಡಿಗೆ ಬಿದ್ದಿದ್ದಾರೆ.

ಅಪಘಾತದಿಂದ ತೀವೃ ಗಾಯಗೊಂಡ ದ್ವಿಚಕ್ರ ವಾಹನ ಸವಾರರನ್ನು ಕಾರ್ಕಳ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ದಾರಿ ಮದ್ಯೆ ಹಾಗೂ ಸಹಸವಾರ ರಾಜೇಂದ್ರ ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.

Comments are closed.