ಕರಾವಳಿ

ವಿಧಾನ ಪರಿಷತ್ ಸಭಾ ನಾಯಕರಾಗಿ ಕೋಟ ಶ್ರೀನಿವಾಸ ಪೂಜಾರಿ ಆಯ್ಕೆ

Pinterest LinkedIn Tumblr

ಬೆಂಗಳೂರು: ರಾಜ್ಯದ ಮೀನುಗಾರಿಕೆ ಬಂದರುಮತ್ತು ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರನ್ನು ವಿಧಾನ ಪರಿಷತ್‌ ಸಭಾ ನಾಯಕರಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಆಯ್ಕೆ ಮಾಡಿದ್ದಾರೆ.

ವಿಧಾನ ಪರಿಷತ್ ಸದಸ್ಯರು ಆಗಿರುವ ಕೋಟ ಅವರನ್ನು ಈ ಹಿಂದೆ ಕಾಂಗ್ರೆಸ್- ಜೆಡಿಎಸ್ ಮೈತ್ರಿ ಸರಕಾರದ ಅವಧಿಯಲ್ಲಿ ವಿಧಾನ ಪರಿಷತ್ ವಿಪಕ್ಷದ ನಾಯಕರಾಗಿ ಮಾಡಲಾಗಿದ್ದು ಪ್ರತಿಪಕ್ಷದಲ್ಲಿದ್ದುಕೊಂಡು ಅಂದಿನ ಸರಕಾರದ ವಿರುದ್ಧ ಆಗ್ಗಾಗೆ ಮಾತಿನ ಚಾಟಿ ಬೀಸಿ ಸಮರ್ಥವಾಗಿ ನಿಬಾಯಿಸಿದ್ದರು.

ಸದ್ಯ ಕೋಟ ಅವರನ್ನು ಪರಿಷತ್‌ನ ಆಡಳಿತ ಪಕ್ಷದ ಸಭಾ ನಾಯಕರಾಗಿ ನಿಯೋಜಿಸಲಾಗಿದೆ.

Comments are closed.