ಕರಾವಳಿ

ವಿನಯ್ ಗುರೂಜಿ ಮೊರೆಹೋದ ಸಿಎಂ ಬಿಎಸ್‌ವೈ: ದತ್ತಾಶ್ರಮದಲ್ಲಿ ಮಹಾರುದ್ರ ಯಾಗ ಪೂರ್ಣಾಹುತಿ

Pinterest LinkedIn Tumblr

ಚಿಕ್ಕಮಗಳೂರು: ಚಿಕ್ಕಮಗಳೂರು ಜಿಲ್ಲೆ ಶ್ರಂಗೇರಿಯಲ್ಲಿರುವ ಗೌರಿಗದ್ದೆ ಆಶ್ರಮದಲ್ಲಿ ನಡೆದ ಹೋಮ, ಹವನ ಕಾರ್ಯಕ್ರಮದಲ್ಲಿ ಸಿಎಂ ಯಡಿಯೂರಪ್ಪ ಭಾಗಿಯಾದರು.

ಗೌರಿಗದ್ದೆ ಆಶ್ರಮದಲ್ಲಿ ವಿನಯ್ ಗುರೂಜಿ ನೇತೃತ್ವದಲ್ಲಿ ಈ ಹೋಮ, ಹವನ ಕಾರ್ಯಕ್ರಮ ನಡೆಯಿತು. ಗೌರಿಗದ್ದೆ ದತ್ರಾತ್ರೇಯ ಆಶ್ರಮದಲ್ಲಿ ಸತತ 2 ಗಂಟೆಗಳ ಕಾಲ ನಡೆದ ಮಹಾರುದ್ರಾಯಾಗ ಹಾಗೂ ಗಣಪತಿ ಹೋಮದಲ್ಲಿ ಸಿಎಂ ಯಡಿಯೂರಪ್ಪ ಭಾಗಿಯಾಗಿದ್ದರು. ನೂರಾರು ಜನ ಪುರೋಹಿತರ ನೇತೃತ್ವದಲ್ಲಿ ಹೋಮದ ಪೂರ್ಣಾಹುತಿ ನಡೆದಿದೆ.

ಅಧಿಕಾರ ಸಿಗುವ ಮೊದಲೂ ಕೂಡ ಹಲವು ಭಾರೀ ಬಿಎಸ್ ಯಡಿಯೂರಪ್ಪ ಆಶ್ರಮಕ್ಕೆ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಸಚಿವ ಸಿ.ಟಿ ರವಿ, ಸಂಸದೆ ಶೋಭಾ ಕರಂದ್ಲಾಜೆ ಮೊದಲಾದವರಿದ್ದರು.

Comments are closed.