ಕರಾವಳಿ

ಸೋಮೇಶ್ವರ ರುದ್ರಪಾದೆಯ ತಟದಲ್ಲಿ ಸಮುದ್ರ ಪೂಜೆ

Pinterest LinkedIn Tumblr

ಮಂಗಳೂರು : ಕರಾವಳಿ ಕಲ್ಯಾಣ ಪರಿಷತ್ ಹಾಗೂ ಸೋಮೇಶ್ವರ ಶಕ್ತಿ ಕೇಂದ್ರ ಇದರ ವತಿಯಿಂದ ಸಮುದ್ರ ಪೂಜೆ ಸೋಮೇಶ್ವರ ರುದ್ರಪಾದೆಯ ತಟದಲ್ಲಿ ಶ್ರಿ ಮೂಕಾಂಬಿಕ ದೇವಸ್ಥಾನ, ಕೊಲ್ಯ ಇದರ ಟ್ರಸ್ಟೀ ಆಯರ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

ಮುಖ್ಯ ಅಥಿತಿಗಳಾಗಿ ಸುಧಾಕರ್ ಭಂಡಾರಿ, ಚಂದ್ರಹಾಸ ಪಿ ಕನೀರ್ಥೋಟ ಭಾಗವಹಿಸಿದ್ದರು.ವಿಷ್ಣು ಸಹಸ್ರ ನಾಮದ ನಂತರ ಅರ್ಚಕರಾದ ಶ್ರಿ ಸದಾಶಿವ ಐತಾಳ್ ಅವರು ಗಂಗಾ ಮಾತೆಗೆ ಬಾಗಿನ ಸಮರ್ಪಿಸಿದರು.

ಡಾಕ್ಟರ್ ಮಾಧವಿ ಕೋಟೆಕಾರು,ಚಂಚಲಕ್ಷಿ, ಸುರೇಖಾ,ರಮಣಿ,ಗುಣವತಿ ಆಚರ್,ವಸಂತ್ ಉಳ್ಳಾಲ್,ಜಯಂತ್ ಹಾಗೂ ಅಪಾರ ಸಂಖ್ಯೆಯ ಆಸ್ತಿಕ ಬಾಂಧವರು ಉಪಸ್ಥಿತರಿದ್ದರು.

Comments are closed.