ಕರಾವಳಿ

ಮಂಗಳೂರಿನಿಂದ ಕೇರಳಕ್ಕೆ ಅಕ್ರಮ ಮರಳು ಸಾಗಾಟ : ಮರಳು ಸಹಿತಾ ನಾಲ್ಕು ಲಾರಿ ವಶ

Pinterest LinkedIn Tumblr

ಮಂಗಳೂರು : ಬಿ.ಸಿ. ರೋಡ್ ಕಡೆಯಿಂದ ಯಾವುದೇ ಪರವಾನಿಗೆ ಇಲ್ಲದೆ ಅಕ್ರಮವಾಗಿ ಕೇರಳ ರಾಜ್ಯಕ್ಕೆ ಮರಳು ಸಾಗಾಟ ಮಾಡುತ್ತಿದ್ದ ನಾಲ್ಕು ಲಾರಿಗಳನ್ನು ಮರಳು ಸಹಿತಾ ಕಂಕನಾಡಿ ನಗರ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಬುಧವಾರ ಕಂಕನಾಡಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ವಿವಿಧ ಕಡೆಗಳಲ್ಲಿ ವಾಹನ ತಪಾಸಣೆ ಮಾಡುತ್ತಿರುವ ಸಮಯ ಬಿ.ಸಿ. ರೋಡ್ ಕಡೆಯಿಂದ ಪಡೀಲ್ ಮಾರ್ಗವಾಗಿ ಕೇರಳ ಕಡೆಗೆ ಬರುತ್ತಿದ್ದ ಆಸ್ಟಿನ್ ಮಿರಾಂದ ಎಂಬವರು ಮಾಲಕ & ಚಾಲಕರಾಗಿರುವ KA-19-D-5378 ನೇ ಟಿಪ್ಪರ್ ಲಾರಿ, ಹಸನಬ್ಬ ಎಂಬವರು ಮಾಲಕ & ಚಾಲಕರಾಗಿರುವ KA-19-AA-0493 ನೇ ಟಿಪ್ಪರ್ ಲಾರಿ, ಅಬ್ದುಲ್ ರೆಹಮಾನ್ ರವರ ಮಾಲಕತ್ವದ ಹಾಗೂ ಬಿಜು ಎಂಬವರು ಚಾಲಕರಾಗಿರುವ KA-19-AA-9589 ನೇ ಲಾರಿ ಮತ್ತು ಹರೀಶ್ ರವರ ಮಾಲಕತ್ವದ KA-54-5643 (ಚಾಲಕನು ಪರಾರಿಯಾಗಿರುತ್ತಾನೆ) ನೇ ನಂಬ್ರದ ಲಾರಿಗಳಲ್ಲಿ ಮರಳನ್ನು ಯಾವುದೇ ಪರವಾನಿಗೆ ಇಲ್ಲದೆ ಅಕ್ರಮವಾಗಿ ಕೇರಳ ರಾಜ್ಯಕ್ಕೆ ಸಾಗಾಟ ಮಾಡುತ್ತಿರುವುದನ್ನು ಪತ್ತೆ ಹಚ್ಚಿ ವಶಕ್ಕೆ ಪಡೆದುಕೊಂಡಿರುತ್ತಾರೆ.

ಸ್ವಾಧೀನ ಪಡಿಸಿಕೊಂಡಿರುವ ಮರಳು ಮತ್ತು ಲಾರಿಯ ಒಟ್ಟು ಮೌಲ್ಯ ರೂ. 36,50,000/ ಎಂದು ಅಂದಾಜಿಸಲಾಗಿದೆ. ವಶಪಡಿಸಿಕೊಂಡಿರುವ ಸೊತ್ತುಗಳನ್ನು ಮುಂದಿನ ಸೂಕ್ತ ಕಾನೂನು ಕ್ರಮಕ್ಕಾಗಿ ಉಪ ನಿರ್ದೇಶಕರು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಮಂಗಳೂರು ರವರಿಗೆ ಹಸ್ತಾಂತರಿಸಲಾಗಿದೆ.

ಕಂಕನಾಡಿ ನಗರ ಪೊಲೀಸ್ ಠಾಣಾ ನಿರೀಕ್ಷಕರಾದ ಅಶೋಕ್ ಪಿ. ಹಾಗೂ ಪಿ.ಎಸ್.ಐ. ರವರಾದ ಪ್ರದೀಪ್ ಟಿ. ಆರ್. ಮತ್ತು ಸಿಸಿಬಿ ಘಟಕದ ಪಿ.ಎಸ್.ಐ. ರವರಾದ ಕಬ್ಬಾಳ್ ರಾಜ್ ಮತ್ತು ಠಾಣಾ ಸಿಬ್ಬಂದಿಗಳು ಪತ್ತೆ ಕಾರ್ಯದಲ್ಲಿ ಭಾಗವಹಿಸಿರುತ್ತಾರೆ.

Comments are closed.