ಉಡುಪಿ: ಮಲ್ಪೆಯಿಂದ ಮೀನುಗಾರಿಕೆಗೆ ತೆರಳಿದ ಸುವರ್ಣ ತ್ರಿಭುಜ ಬೋಟ್ ಮತ್ತು ಅದರಲ್ಲಿದ್ದ 7 ಮಂದಿ ಮೀನುಗಾರರು ನಾಪತ್ತೆಯಾಗಿ 53 ದಿನ ಕಳೆದರೂ ಇನ್ನೂ ಮಹತ್ವದ ಸುಳಿವು ಸಿಗದೇ ನಿಗೂಢವಾಗಿಯೇ ಉಳಿದಿದ್ದು ಮನೆ ಮಂದಿಯ ನೋವು ಹೆಚ್ಚುತ್ತಲೇ ಇದೆ.
ಮಹಾರಾಷ್ಟ್ರದ ಮಾಲ್ವಾಣ್ ಸಮೀಪ ಅಲ್ಲಿನ ಮೀನುಗಾರರಿಗೆ ಸಮುದ್ರದ ಮಧ್ಯೆ ಬೋಟಿನ ಕ್ಯಾಬಿನ್ನ ಮೇಲ್ಛಾವಣಿ ಸಮುದ್ರದಲ್ಲಿ ತೇಲುತ್ತಿರುವುದು ಪತ್ತೆಯಾಗಿದ್ದು, ಅದು ಸುವರ್ಣ ತ್ರಿಭುಜ ಬೋಟಿನದ್ದಾಗಿರಬಹುದೇ ಎಂದು ಖಚಿತಪಡಿಸಲು ನಾಪತ್ತೆಯಾದ ಮೀನುಗಾರರ ಸಂಬಂಧಿಕರಿಗೆ ಚಿತ್ರವನ್ನು ಕಳುಹಿಸಲಾಗಿದೆ. ಆದರೆ ಅವರು ಅದನ್ನು ಅಲ್ಲಗಳೆದಿದ್ದಾರೆ ಎನ್ನಲಾಗಿದೆ.
Comments are closed.