ಕರಾವಳಿ

ಸಾಸ್ತಾನದಲ್ಲಿ ಸ್ಥಳೀಯರಿಗೂ ಟೋಲ್ ವಿನಾಯಿತಿ ನೀಡಲ್ಲ: ನವಯುಗ ಅಧಿಕಾರಿಗಳು

Pinterest LinkedIn Tumblr

ಉಡುಪಿ: ಸಾಸ್ತಾನ ಟೋಲ್‌ನಲ್ಲೂ ವಿನಾಯಿತಿ ನೀಡುವುದಿಲ್ಲ ಎಂದು ನವಯುಗ ಅಧಿಕಾರಿ ಹೇಳಿದ್ದಾರೆ. ನಿನ್ನೆ ಡಿಸಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಅವರ ನೇತ್ರತ್ವ ನಡೆದ ಸಭೆಯಲ್ಲಿ ಈ ವಿಚಾರವನ್ನು ಅಧಿಕಾರಿಗಳು ತಿಳಿಸಿದ್ದು ಸ್ಥಳೀಯರ ಆತಂಕಕ್ಕೆ ಕಾರಣವಾಗಿದೆ.

ಈ ಹಿಂದೆ ಸಾಸ್ತಾನದಲ್ಲಿ ದೊಡ್ಡ ಮಟ್ಟದ ಹೋರಾಟ ನಡೆದ ಹಿನ್ನೆಲೆಯಲ್ಲಿ ಮಾತುಕತೆ ನಡೆಸಿ ಜಿ.ಪಂ. ಕೋಟ ಕ್ಷೇತ್ರ ವ್ಯಾಪ್ತಿಯವರಿಗೆ ವಿನಾಯಿತಿ ನೀಡಲಾಗಿತ್ತು. ಅದೇ ರೀತಿ ಪಡುಬಿದ್ರಿಯಲ್ಲೂ ಬೇಡಿಕೆ ವ್ಯಕ್ತವಾದ್ದರಿಂದ ಸಾಸ್ತಾನದಲ್ಲಿ ವಿನಾಯಿತಿ ರದ್ದು ಮಾಡುವುದಾಗಿ ಅಧಿಕಾರಿ ಹೇಳಿಕೆ ನೀಡಿದ್ದಾರೆ. ಆದರೆ ಇಂತಹ ಕ್ರಮಕ್ಕೆ ಮುಂದಾದರೆ ಸಹಿಸುವುದಿಲ್ಲ.

ಜನರು ಈ ಹಿಂದೆ ತಾಳ್ಮೆಯಿಂದ ಹೋರಾಟ ನಡೆಸಿದ್ದೇವೆ. ಇನ್ನು ಮುಂದೆ ಉಗ್ರ ಸ್ವರೂಪದ ಹೋರಾಟ ನಡೆಸುತ್ತೇವೆ ಎಂದು ಸ್ಥಳೀಯರು ಎಚ್ಚರಿಕೆ ನೀಡಿದ್ದಾರೆ.

Comments are closed.