ಕರಾವಳಿ

ಸಚಿವ ಖಾದರ್‌ರಿಂದ ಉಳ್ಳಾಲ ರಸ್ತೆ ಕಾಮಗಾರಿ ಪರಿಶೀಲನೆ

Pinterest LinkedIn Tumblr

ಉಳ್ಳಾಲ: ಉಳ್ಳಾಲ ನಗರದ ವಿವಿಧ ರಸ್ತೆ ಕಾಮಗಾರಿಯನ್ನು ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಮಂಗಳವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಉಳ್ಳಾಲ ಒಳಪೇಟಿಯಿಂದ ನೇರವಾಗಿ ಮಂಚಿಲಕ್ಕೆ ಸಂಪರ್ಕಿಸುವ ರಸ್ತೆ ಹಾಗೂ ವಿವಿಧ ರಸ್ತೆ ಕಾಮಗಾರಿ ಕುರಿತು ಆಯ ಗುತ್ತಿಗೆದಾರರೊಂದಿಗೆ ನೇರವಾಗಿ ಚರ್ಚಿಸಿದರು.

ಲೋಕೋಪಯೋಗಿ ಸಹಾಯಕ ಇಂಜಿನಿಯರ್ ರವಿ ಕುಮಾರ್, ನಗರಸಭೆ ಮಾಜಿ ಸದಸ್ಯ ರಾದ ಮುಸ್ತಾಫ ಅಬ್ದುಲ್ಲಾ, ದಿನೇಶ್ ರೈ ನಗರಸಭೆ ಸದಸ್ಯರಾದ ಯು.ಎ ಇಸ್ಮಾಯಿಲ್, ಅಶ್ರಫ್ ಮಾಸ್ತಿಕಟ್ಟೆ, ಸ್ವಪ್ನಾ ಹರೀಶ್ , ವೀಣಾ ಡಿಸೋಜಾ, ಬಾಝಿಲ್ ಡಿಸೋಜ, ಹಾಗೂ ಸ್ಥಳೀಯರಾದ ಯು.ಎಂ ಜಬ್ಬಾರ್, ಗುತ್ತಿಗೆದಾರ ಅಹಮ್ಮದ್ ಬಾವಾ ಕೊಟ್ಟಾರ, ಅಯೂಬ್ ಮಂಚಿಲ, ರಾಜು ಬಂಡಸಾಲೆ, ಇಸ್ಮಾಯಿಲ್ ಸೀದಿಯಬ್ಬ , ಸೋಮೇಶ್ವರ ಪಂ. ಸದಸ್ಯ ದೀಪಕ್ ಪಿಲಾರ್ ಇಬ್ರಾಹಿಂ ಹೆಜಮಾಡಿ, ಇಂಜಿನಿಯರುಗಳಾದ ಅನ್ಸಾರ್ , ಮಜೀದ್, ಅಫ್ರೀದ್ ಹುಸೈನ್ ಮೊದಲಾದವರು ಉಪಸ್ಥಿತರಿದ್ದರು.

ಚಿತ್ರ : ಆರೀಫ್ ಕಲ್ಕಟ್ಟ

Comments are closed.