ಕರಾವಳಿ

ಶುಂಠಿರಸ, ನಿಂಬೆ ರಸದೊಂದಿಗೆ ಜೇನುತುಪ್ಪವನ್ನು ಮಿಶ್ರಣ ಮಾಡಿ ಸೇವಿಸಿದರೆ ವಾಂತಿ ನಿವಾರಣೆ

Pinterest LinkedIn Tumblr

ಜೇನುತುಪ್ಪ ನಾಲಿಗೆಗೆ ಮಾತ್ರ ಸಿಹಿಯಲ್ಲ ದೇಹಕ್ಕೂ ಬಹಳ ಸಿಹಿಯಂದರೆ ತಪ್ಪಾಗಲಾರದು, ಯಾಕೆಂದರೆ ದೇಹಕ್ಕೆ ಬೇಕಾದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರವನ್ನ ವಹಿಸುವುದಲ್ಲದೆ ದೇಹದ ಕೊಬ್ಬನ್ನು ಕರಗಿಸುತ್ತದೆ ಹಾಗು ಸುಂದರ ತೆಳ್ಳನೆಯ ದೇಹವನ್ನು ಪಡೆಯಲು ಬಲು ಸಹಕಾರಿಯಾಗಿ ಕೆಲಸ ಮಾಡುತ್ತದೆ ಇಷ್ಟೇ ಅಲ್ಲದೆ ಇನ್ನು ಅಧಿಕ ಆರೋಗ್ಯದ ಲಾಭದ ಬಗ್ಗೆ ಇಂದು ತಿಳಿಯೋಣ ಬನ್ನಿ.

ಜೀರ್ಣಕ್ರಿಯೆಗೆ ಉತ್ತಮ : ಅಜೀರ್ಣವನ್ನು ಪ್ರತಿರೋಧಿಸುತ್ತದೆ, ಒಂದು ಅಥವಾ ಎರಡು ಚಮಚ ಜೇನುತುಪ್ಪ ಪ್ರತಿದಿನ ಸೇವಿಸಿದರೆ ಹೊಟ್ಟೆಯಲ್ಲಿ ಆಹಾರ ಹುದುಗದೆ ಜೀರ್ಣ ವಾಗುತ್ತದೆ.

ವಾಕರಿಕೆ ನಿವಾರಣೆ :ವಾಂತಿ ಸಮಯದಲ್ಲಿ ಇದನ್ನು ತಡೆಗಟ್ಟಲು ಶುಂಠಿಯ ಮತ್ತು ನಿಂಬೆ ರಸದೊಂದಿಗೆ ಜೇನುತುಪ್ಪವನ್ನು ಮಿಶ್ರಣ ಮಾಡಿ ಸೇವಿಸಿದರೆ ವಾಂತಿ ನಿಲ್ಲುತ್ತದೆ.

ಮೊಡವೆ ಚಿಕಿತ್ಸೆ:ಮೊಡವೆಯಷ್ಟೇ ಅಲ್ಲದೆ ಚರ್ಮದ ಅಲರ್ಜಿಗಳಿದ್ದರು ನೀವು ಸ್ವಲ್ಪ ಜೇನನ್ನು ತೆಗೆದುಕೊಂಡು ಮುಖ ಕಾಲು ಕೈ ಗಳಿಗೆ ಮಸಾಜ್ ಮಾಡಿ ೧೦ ನಿಮಿಷ ಬಿಟ್ಟು ಸ್ನಾನ ಮಾಡಿ.

ಕಡಿಮೆ ಕೊಲೆಸ್ಟ್ರಾಲ್ : ಇದು ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಮತ್ತು ಆದ್ದರಿಂದ ಪರಿಧಮನಿ ಕಾಯಿಲೆಯ ಅಪಾಯವನ್ನು ಕಡಿಮೆ ಮಾಡುತ್ತದೆ.

ಪರಿಚಲನೆ ಸುಧಾರಿಸುತ್ತದೆ : ಹೃದಯವನ್ನು ಬಲಪಡಿಸುವ ಮೂಲಕ ಮತ್ತು ರಕ್ತ ಪರಿಚಲನೆ ಸುಧಾರಿಸುವ ಮೂಲಕ ಕಚ್ಚಾ ಜೇನು ನಿಮ್ಮ ಮೆದುಳಿನ ಕಾರ್ಯವನ್ನು ಅತ್ಯುತ್ತಮವಾಗಿ ಮಾಡುತ್ತದೆ.

ಉತ್ಕರ್ಷಣ ನಿರೋಧಕ ಬೆಂಬಲ : ಕಚ್ಚಾ ಜೇನು ಸೇವನೆಯು ಪ್ಲೇಕ್-ಫೈಟಿಂಗ್ ಉತ್ಕರ್ಷಣ ನಿರೋಧಕಗಳನ್ನು ಹೆಚ್ಚಿಸುತ್ತದೆ.

ನಿದ್ರೆ ಬರಿಸುತ್ತದೆ :ಬೆಚ್ಚಗಿನ ಹಾಲಿನಲ್ಲಿ ಒಂದು ಚಮಚ ಜೇನು ಬೆರೆಸಿ ಕುಡಿದರೆ ರಾತ್ರಿ ಒಳ್ಳೆ ನಿದ್ರೆ ಬರುತ್ತದೆ.

ಜೈವಿಕ ಬೆಂಬಲ : ಜೇನು ನೈಸರ್ಗಿಕ ಪ್ರೀಬಯಾಟಿಕ್ಗಳನ್ನು ತುಂಬಿದೆ, ಇದು ಕರುಳಿನಲ್ಲಿ ಬರುವ ಬ್ಯಾಕ್ಟೀರಿಯಾವನ್ನು ತಡೆಯುತ್ತದೆ.

Comments are closed.