ಕರಾವಳಿ

ದಾರ್ಶನಿಕರ ಸಂದೇಶಗಳು ಸೂಕ್ತವಾದ ಸಮಾಜ ಸೃಷ್ಟಿಗೆ ಪೂರಕ : ಕನಕ ಜಯಂತಿ ಕಾರ್ಯಕ್ರಮದಲ್ಲಿ ಡಿಸಿ ಸಸಿಕಾಂತ್ ಸೆಂಥಿಲ್

Pinterest LinkedIn Tumblr

ಮಂಗಳೂರು ಡಿಸೆಂಬರ್ 26 : ದಕ್ಷಿಣ ಕನ್ನಡ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ನಗರದ ತುಳುಭವನದಲ್ಲಿ ಬುಧವಾರ ಕನಕ ಜಯಂತಿ ಆಚರಣೆ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮ ಉದ್ಘಾಟಿಸಿದ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಮಾತನಾಡಿ, ಕನಕದಾಸರು ನೀಡಿದ ಕೀರ್ತನೆಗಳ ಮೂಲಕ ನೀಡಿದ ಜೀವನ ಮೌಲ್ಯ ಸದಾಕಾಲ ಪ್ರಸ್ತುತ ಎಂದು ಹೇಳಿದರು. ಕನಕದಾಸರ ಬಗ್ಗೆ ಸಂಶೋಧನೆಗಳಾಗಬೇಕು; ಅವರ ಭಕ್ತಿ ಮಾರ್ಗ ಸಮಾಜಕ್ಕೆ ಮಾರ್ಗದರ್ಶಿಯಾಗಬೇಕೆಂಬ ನಿಟ್ಟಿನಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಅವರ ಪೀಠವನ್ನು ಸ್ಥಾಪಿಸಲಾಗಿದೆ. ಮಂಗಳೂರಿನಲ್ಲಿ ಕನಕ ಭವನ ನಿರ್ಮಿಸಬೇಕು ಎಂದು ಕುರುಬರ ಸಂಘ ಬೇಡಿಕೆಯಿಟ್ಟಿದೆ. ಕನಕ ಭವನ ನಿರ್ಮಾಣ ಅಥವಾ ಸರಕಾರಿ ಕಟ್ಟಡಕ್ಕೆ ಕನಕದಾಸರ ಹೆಸರು ಇರಿಸಲಾಗುವುದು. ಜತೆಗೆ ಮಂಗಳೂರಿನ ರಸ್ತೆಯೊಂದಕ್ಕೆ ಕನಕದಾಸರ ಹೆಸರಿಡಲು ಪ್ರಯತ್ನಿಸಲಾಗುವುದು ಎಂದು ಅವರು ಹೇಳಿದರು.

ಜಿಲ್ಲಾಧಿಕಾರಿ ಎಸ್. ಸಸಿಕಾಂತ್ ಸೆಂಥಿಲ್ ಮಾತನಾಡಿ, ಎಲ್ಲ ಆಚರಣೆಗಳು ಧರ್ಮ ಮತ್ತು ದಾರ್ಶನಿಕರ ಸಂದೇಶಗಳು ಸಮ ಸಮಾಜ ಸೃಷ್ಟಿಗೆ ಪೂರಕವಾಗಿದೆ. ಪ್ರೀತಿ, ಮಾನವೀಯ ಮೌಲ್ಯ ಎಲ್ಲ ಸಾಧಕರ ಜೀವನದ ಸಂದೇಶವಾಗಿದೆ. ಭಕ್ತಿ ಸಂದೇಶದಲ್ಲಿ ಪ್ರೀತಿ ಸಹಬಾಳ್ವೆಗಳಿರುತ್ತದೆ.

ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಸಿಇಒ ಡಾ. ಸೆಲ್ವಮಣಿ ಆರ್., ಅಪರ ಜಿಲ್ಲಾಧಿಕಾರಿ ಕುಮಾರ್, ಕಸಾಪ ಜಿಲ್ಲಾಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ಕರಾವಳಿ ಕುರುಬರ ಸಂಘ ಅಧ್ಯಕ್ಷ ಡಾ. ಕೆ.ಆರ್. ಪ್ರಕಾಶ್, ಜಿಲ್ಲಾ ಹಾಲುಮತ ಮಹಾಸಭಾ ಅಧ್ಯಕ್ಷ ರಂಗಪ್ಪ, ಶ್ರೀ ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ಯುವ ಘರ್ಜನೆ ಜಿಲ್ಲಾಧ್ಯಕ್ಷ ಧನುಷ್, ಕರ್ನಾಟಕ ಪ್ರದೇಶ ಕುರುಬರ ಪದವೀಧರ ಸಂಘ ಕಾರ್ಯದರ್ಶಿ ಚಂದ್ರಶೇಖರ್ ಅತಿಥಿಯಾಗಿದ್ದರು.

ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ರಾಜೇಶ್ ಜಿ. ಸ್ವಾಗತಿಸಿದರು. ವಿದ್ಯಾಂಗ ಇಲಾಖೆಯ ಪ್ರಕಾಶ್ ಕಾರ್ಯಕ್ರಮ ನಿರೂಪಿಸಿದರು.

Comments are closed.