ಕರಾವಳಿ

ಕುಲಶೇಖರ ಯಾಗ ಸ್ಥಳಕ್ಕೆ ಆಗಮಿಸಿದ ಶ್ರೀ ಶನಿದೇವರ ವಿಗ್ರಹ ಮತ್ತು ಬೃಹತ್ ಹೊರೆಕಾಣಿಕೆ ಶೋಭಾಯಾತ್ರೆ

Pinterest LinkedIn Tumblr

ಮಂಗಳೂರು: ಕುಲಶೇಖರ ಕೈಕಂಬ ಹಿಂದೂ ಯುವ ಸೇನೆ ಆಶ್ರಯದಲ್ಲಿ ಶ್ರೀ ಸಗ್ರಹಮುಖ ಶನೈಶ್ವರ ಮಹಾಯಾಗ ಸಮಿತಿ ವತಿಯಿಂದ ಲೋಕ ಕಲ್ಯಾಣಾರ್ಥ ಡಿ.23 ರಿಂದ 30ರ ವರೆಗೆ ಪದವು ಮೇಗಿನ ಮನೆ ವಠಾರದಲ್ಲಿ ಹಮ್ಮಿಕೊಂಡಿರುವ ಶ್ರೀ ಸಗ್ರಹಮುಖ ಶನೈಶ್ವರ ಮಹಾಯಾಗದ ಪೂರ್ವಭಾವಿಯಾಗಿ ರವಿವಾರ ಬೆಳಗ್ಗೆ ಶರವು ಮಹಾಗಣಪತಿ ದೇವಸ್ಥಾನದಿಂದ ಹೊರಟ ಶ್ರೀ ಶನಿದೇವರ ವಿಗ್ರಹ ಮತ್ತು ಬೃಹತ್ ಹೊರೆಕಾಣಿಕೆ ಶೋಭಾಯಾತ್ರೆ ಯಾಗ ಸ್ಥಳಕ್ಕೆ ಆಗಮಿಸಿತು. ಮಧ್ಯಾಹ್ನ ಉಗ್ರಾಣ ಮುಹೂರ್ತ ನೆರವೇರಿತು.

ಡಿ.23 ರಿಂದ 30ರ ವರೆಗೆ ಬಾಳಂಭಟ್ ಮನೆತನದ ವೇ.ಮೂ.ನಾರಾಯಣ ಭಟ್ ಪೌರೋಹಿತ್ಯದಲ್ಲಿ 80ಕ್ಕೂ ಹೆಚ್ಚು ವೈದಿಕರ ತಂಡದಿಂದ ಶ್ರೀ ಸಗ್ರಹಮುಖ ಶನೈಶ್ವರ ಮಹಾಯಾಗ ಪದವು ಮೇಗಿನ ಮನೆ ವಠಾರದಲ್ಲಿ ನಡೆಯಲಿದೆ. ಡಿ 29 ರಂದು ಬೆಳಗ್ಗೆ 11ಕ್ಕೆ ಪೂರ್ಣಾಹುತಿ. ಡಿ.30 ರಂದು ಸಂಜೆ 4ಕ್ಕೆ ಸಮಾರೋಪ ಸಮಾರಂಭ, ವಿಸರ್ಜನ ಪೂಜೆ, ಸಂಜೆ 6ಕ್ಕೆ ಶ್ರೀ ಶನಿದೇವರ ವಿಗ್ರಹದ ಭವ್ಯ ಶೋಭಾಯಾತ್ರೆ ನಡೆಯಲಿದೆ.

ಸಂಜೆ 6.00ಕ್ಕೆ ಶ್ರೀ ಶನಿದೇವರ ವಿಗ್ರಹದ ಭವ್ಯ ಶೋಭಾಯಾತ್ರೆ ಶಿವಾಜಿ ಮಂಟಪದಿಂದ ವಿವಿಧ ವಾದ್ಯಾಘೋಷಗಳೊಂದಿಗೆ ಹೊರಟು ರಥ ಬೀದಿ ಮಹಮ್ಮಾಯಿ ಕೆರೆಯಲ್ಲಿ ವಿಗ್ರಹದ ಜಲಸ್ತಂಭನವಾಗಲಿದೆ ನಿತ್ಯ ಮಧ್ಯಾಹ್ನ, ರಾತ್ರಿ ಅನ್ನಸಂತರ್ಪಣೆ ನಡೆಯಲಿದೆ.1.20 ಲಕ್ಷ ಚದರಡಿ ವಿಸ್ತೀರ್ಣದ ಸ್ಥಳಾವಕಾಶ ಸಿದ್ದಪಡಿಸಲಾಗಿದೆ.ಯಾಗಕ್ಕೆ ಸುಮಾರು 2,500 ಚದರ ಆಡಿ ಜಾಗವನ್ನು ವ್ಯವಸ್ಥೆಗೊಳಿಸಲಾಗಿದೆ.

ಮಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರದ ಶಾಸಕ ವೇದವ್ಯಾಸ ಕಾಮಾತ್, ಮೇಯರ್ ಕೆ.ಭಾಸ್ಕರ್, ಶ್ರೀ ಸಗ್ರಹಮುಖ ಶನೈಶ್ವರ ಮಹಾಯಾಗ ಸಮಿತಿಯ ಗೌರವಾಧ್ಯಕ್ಷ ಮೋನಪ್ಪ ಭಂಡಾರಿ, ಸಮಿತಿ ಕಾರ್ಯಧ್ಯಕ್ಷ ಎಚ್.ಕೆ.ಪುರುಷೋತ್ತಮ, ಸಂಚಾಲಕ ರಾಮಚಂದ್ರ ಚೌಟ ಪದವು, ಗೌರವಾಧ್ಯಕ್ಷ ವಾಸುದೇವ ಆರ್.ಕೊಟ್ಟಾರಿ, ಉಪಾಧ್ಯಕ್ಷ ಉಮೆಶ್ ರೈ ಪದವು ಮೇಗಿನ ಮನೆ, ಪ್ರಧಾನ ಕಾರ್ಯದರ್ಶಿ ಕಿಶೋರ್ ಕೊಟ್ಟಾರಿ ,ಖಜಾಂಜಿ ಭಾಸ್ಕರಚಂದ್ರ ಶೆಟ್ಟಿ.ಮಾದ್ಯಮ ಸಮಿತಿ ಸಂಚಾಲಕ ಪ್ರವೀಣ್.ಎಸ್.ಕುಂಪಲ, ಅಶ್ವಿತ್ ಕೊಟ್ಟಾರಿ. ಮಹಿಳಾ ವಿಭಾಗದ ಅಧ್ಯಕ್ಷೆ ವಿಜಯ ಅರುಣ್ ಮುಂತಾದವರು ಈ ವೇಳೆ ಉಪಸ್ಥಿತರಿದ್ದರು.

Comments are closed.