ಉಡುಪಿ: ಕಾರ್ಕಳ ತಾಲೂಕಿನ ಬೈಲೂರು ಕೆಳ ಪೇಟೆಯ ಬಳಿ ರಾತ್ರೋರಾತ್ರಿ ಗೋರಿಯೊಂದು ಪತ್ತೆಯಾಗಿದ್ದು, ಮಂಗಳವಾರ ರಾತ್ರಿ ಇಲ್ಲಿ ತಂದಿಟ್ಟಿದ್ದಾರೆ ಎನ್ನಲಾಗಿದೆ.
ಹಿಂದೆ ಆ ಭಾಗದಲ್ಲಿದ್ದ ದರ್ಗಾವನ್ನು 5 ವರ್ಷಗಳ ಹಿಂದೆ ಸುಪ್ರೀಂ ಕೋರ್ಟ್ ಆದೇಶದಂತೆ ತೆರವುಗೊಳಿಸಲಾಗಿತ್ತು. ಜತೆಗೆ ಅಲ್ಲೇ ಇದ್ದ ಶಾರದಾ ವೇದಿಕೆಯನ್ನೂ ತೆರವು ಮಾಡಲಾಗಿತ್ತು. ಇದೊಂದು ಶಾಂತಿ ಕದಡುವ ಯತ್ನ ಎಂದು ಸ್ಥಳೀಯರು ಆರೋಪಿಸಿದ್ದು ಈ ಬಗ್ಗೆ ಸ್ಥಳೀಯ ಜಿ.ಪಂ. ಸದಸ್ಯ ಸುಮಿತ್ ಶೆಟ್ಟಿ ಕೌಡೂರು ಅವರು ನಗರ ಠಾಣೆಗೆ ಮಾಹಿತಿ ನೀಡಿದ್ದು, ಪೊಲೀಸರು ಹಾಗೂ ಸ್ಥಳೀಯ ಪಿಡಿಒ ನೇತೃತ್ವದಲ್ಲಿ ತೆರವುಗೊಳಿಸಿದ್ದಾರೆ.
Comments are closed.