ಹೌದು ಪ್ರತಿ ದಿನ ಬೆಳಗ್ಗೆ ಟೀ ಕಾಫೀ ಕುಡಿಯುವ ಬದಲು ಈ ನಿಂಬೆ ರಸವನ್ನು ಕುಡಿಯುವುದರಿಂದ ನಮ್ಮ ದೇಹಕ್ಕೆ ಹಲವಾರು ಆರೋಗ್ಯಕಾರಿ ಲಾಭಗಳು ಸಿಗುತ್ತವೆ.
ತೂಕ ಇಳಿಕೆಗೆ ಸಹಾಯಕಾರಿ:ಹೌದು ನಿಂಬು ನೀರಿಗೆ ಒಂದು ಚಮಚ ಜೇನುತುಪ್ಪ ಹಾಕಿ ಸೇವಿಸುವುದರಿಂದ ದೇಹದಲ್ಲಿರುವ ಕೊಬ್ಬು ಕರಗುತ್ತದೆ ಜೊತೆಗೆ ಜೀರ್ಣಕ್ರಿಯೆಯೂ ಸರಿಯಾಗಿ ನಡೆಯುವುದರಿಂದ ನಮ್ಮ ದೇಹದ ತೂಕ ಕಡಿಮೆ ಮಾಡುತ್ತದೆ ಮತ್ತು ನಮ್ಮ ದೇಹದ ತೂಕವನ್ನು ಸಮತೋಲನದಲ್ಲಿಡಲು ಸಹಾಯಕಾರಿಯಾಗುತ್ತದೆ
ತ್ವಚೆಯ ಆರೋಗ್ಯಕ್ಕೆ ಉತ್ತಮ: ನಿಂಬೆಹಣ್ಣಿನಲ್ಲಿ ಪೊಟ್ಯಾಶಿಯಮ್, ಕ್ಯಾಲ್ಶಿಯಮ್, ಮ್ಯಾಗ್ನೇಶಿಯಮ್ ನಂತಹ ಮಿನರಲ್ಸ್ಗಳಿವೆ. ಇವು ರಕ್ತ ಸಂಚಾರ ಸರಿಯಾದ ರೀತಿಯಲ್ಲಿ ಆಗುವಂತೆ ಮಾಡಿ ಉತ್ತಮ ಸ್ಕಿನ್ ಸೆಲ್ಸ್ಗಳನ್ನು ಒದಗಿಸುತ್ತದೆ.
ಸಂಧಿ ವಾತ ನಿವಾರಿಸುತ್ತದೆ: ಪ್ರತಿನಿತ್ಯ ಬೆಳಗ್ಗೆ ನಿಂಬು ನೀರು ಸೇವಿಸುವುದರಿಂದ ಮಸಲ್ಸ್ ಪೇನ್, ಸಂಧಿವಾತ ಕ್ರಮೇಣ ಕಡಿಮೆಯಾಗುತ್ತದೆ.
ಲೀವರ್ಗೆ ಉತ್ತಮ: ಬಿಸಿ ನೀರಿಗೆ ನಿಂಬು ರಸ ಸೇರಿಸಿ ಹಸಿದ ಹೊಟ್ಟೆಯಲ್ಲಿ ಸೇವಿಸುವುದರಿಂದ ಲೀವರ್ ಎಲ್ಲಾ ಕಲ್ಮಶಗಳಿಂದ ಸ್ವಚ್ಛಗೊಳ್ಳುತ್ತದೆ. ಜೊತೆಗೆ ಅನಾರೋಗ್ಯಕರಿ ಆಹಾರ ಸೇವನೆಯ ಪದ್ಧತಿಯ ಕಾರಣ ದೇಹದಲ್ಲಿ ಶೇಖರಣೆಗೊಂಡ ಟಾಕ್ಸಿಕ್ ಅಂಶಗಳನ್ನು ತೆಗೆದುಹಾಕಿ, ಲೀವರ್ ಆರೋಗ್ಯವನ್ನು ಕಾಪಾಡುತ್ತದೆ.
ಚೈತನ್ಯ ನೀಡುತ್ತದೆ: ಬೆಳಗ್ಗೆ ಎದ್ದು ಬಿಸಿ ನೀರಿಗೆ ನಿಂಬೆ ರಸ ಸೇರಿಸಿ ಸೇವಿಸಿದರೆ ದಿನಪೂರ್ತಿ ಯಾವುದೇ ಆಯಾಸವಿಲ್ಲದೆ ಆ್ಯಕ್ಟೀವ್ ಆಗಿರಲು ಸಹಾಯಮಾಡುತ್ತದೆ.
ಇಮ್ಯುನಿಟಿಯನ್ನು ಹೆಚ್ಚಿಸುತ್ತದೆ: ನಿಂಬೆಹಣ್ಣಿನಲ್ಲಿರುವ ವಿಟಮಿನ್ ಸಿ ಅಂಶ ಸಾಮಾನ್ಯ ಜ್ವರ, ಶೀತದಿಂದ ದೇಹವನ್ನು ರಕ್ಷಿಸುತ್ತದೆ. ಜೊತೆಗೆ ರೋಗ ಪ್ರತಿರೋಧಕ ಶಕ್ತಿಯನ್ನೂ ಹೆಚ್ಚಿಸುತ್ತದೆ.
ಗ್ಯಾಸ್ಟ್ರಿಕ್ ಸಮಸ್ಯೆ ನಿವಾರಿಸುತ್ತದೆ: ಗ್ಯಾಸ್ಟ್ರಿಕ್ ಸಮಸ್ಯೆ ಇರುವವರು ಪ್ರತಿದಿನ ಬೆಳಗ್ಗೆ ಒಂದು ಲೋಟ ಬಿಸಿ ನೀರಿಗೆ ಒಂದು ನಿಂಬೆ ಹಣ್ಣಿನ ರಸವನ್ನು ಬೆರೆಸಿ ಕುಡಿಯುವುದರಿಂದ ಈ ಸಮಸ್ಯೆಯಿಂದ ಮುಕ್ತಿ ಪಡೆಯಬಹುದಾಗಿದೆ.
Comments are closed.