ಕರಾವಳಿ

ಸಂಘನಿಕೇತನ : 71ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವಕ್ಕೆ ಸಂಭ್ರಮದ ತೆರೆ

Pinterest LinkedIn Tumblr

ಮಂಗಳೂರು,ಸೆಪ್ಟಂಬರ್.18 : ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ವತಿಯಿಂದ ಮಂಗಳೂರಿನ ಪ್ರತಾಪನಗರದಲ್ಲಿರುವ ಸಂಘನಿಕೇತನದಲ್ಲಿ ಪೂಜಿಸಲ್ಪಟ್ಟ 71ನೇ ವರ್ಷದ ಸಾರ್ವಜನಿಕ ಶ್ರೀಗಣೇಶೋತ್ಸವವು ಬಹಳ ಸಂಭ್ರಮ ಸಡಗರೊಂದಿಗೆ ಸೋಮವಾರ ಸಮಾಪನಗೊಂಡಿತ್ತು.

ಸೋಮವಾರ ಸಂಜೆ ನಗರದ ಪ್ರತಾಪನಗರದಲ್ಲಿರುವ ಸಂಘನೀಕೇತನದದಿಂದ ಹೊರಟ ಶ್ರೀ ಗಣಪತಿ ದೇವರ ವೈಭವದ ಶೋಭಾಯಾತ್ರೆಯು ಮಣ್ಣಗುಡ್ಡ, ಗುರ್ಜಿ. ಆಳಕೆ,ನ್ಯೂಚಿತ್ರಾ ಮಾರ್ಗವಾಗಿ ಸಾಗಿ ರಥಭೀದಿಯಲ್ಲಿರುವ ಶ್ರೀ ಕುಡ್ತೇರಿ ಮಾಹಮ್ಮಾಯಿ ದೇವಸ್ಥಾನದ ಕೆರೆಯಲ್ಲಿ ಸಂಪನ್ನಗೊಂಡಿತ್ತು.

ಸಂಸದ ನಳಿನ್ ಕುಮಾರ್ ಕಟೀಲ್, ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮಾತ್, ಮಂಗಳೂರು ಉತ್ತರ ಶಾಸಕ ಡಾ, ವೈ, ಭರತ್ ಶೆಟ್ಟಿ, ಕಸಾಪ ಜಿಲ್ಲಾಧ್ಯಕ್ಷ ಎಸ್.ಪ್ರದೀಪ್ ಕುಮಾರ್ ಕಲ್ಕೂರ, ಸಂಘದ ಪ್ರಮುಖರಾದ ಜಯ ಪ್ರಕಾಶ್ ,ಮೋಹನ್ ಆಚಾರ್, ಚಂದ್ರಕಾಂತ್,ಸಂಜಯ ಪ್ರಭು, ಗುರುಚರಣ್, ರಾಜೇಂದ್ರ ಶೆಟ್ಟಿ ಹಾಗೂ ಮತ್ತಿತ್ತರ ಆರ್ ಎಸ್ ಎಸ್ ಪ್ರಮುಖರು ಮತ್ತು ಬಿಜೆಪಿಯ ಮುಖಂಡರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.

ಚಿತ್ರ : ಮಂಜು ನಿರೇಶ್ವಾಲ್ಯ ಹಾಗೂ ಎಸ್.ಕೆ

Comments are closed.