ಕರಾವಳಿ

ಶಾಸಕ ವೇದವ್ಯಾಸ ಕಾಮಾತ್‌ರಿಂದ ಪರಿಶಿಷ್ಟ ವರ್ಗಗಳ ವಸತಿ ಪ್ರದೇಶದಲ್ಲಿ ಗ್ರಾಮ ಸಭೆ

Pinterest LinkedIn Tumblr

ಮಂಗಳೂರು : ಭಾರತೀಯ ಜನತಾ ಪಾರ್ಟಿಯ ಮಂಗಳೂರು ನಗರ ದಕ್ಷಿಣ ವಿಧಾನಸಭಾ ಕ್ಷೇತ್ರದ ವತಿಯಿಂದ ಸಂಪರ್ಕ್ ಫಾರ್ ಸಮರ್‍ಥನ್ ಅಭಿಯಾನದ ಅಂಗವಾಗಿ ಭಾನುವಾರ ಬೆಳಿಗ್ಗೆ ಕುಲಶೇಖರ ಕೋಟಿಮುರದ ಪರಿಶಿಷ್ಟ ವರ್ಗಗಳ ವಸತಿ ಪ್ರದೇಶದಲ್ಲಿ ಗ್ರಾಮ ಸಭೆ ನಡೆಯಿತು.

ಶಾಸಕ ವೇದವ್ಯಾಸ ಕಾಮತ್ ಅವರು ಅಲ್ಲಿನ ಪರಿಶಿಷ್ಟ ವರ್ಗಗಳ ಮನೆಯೊಂದರಲ್ಲಿ ಬೆಳಗ್ಗಿನ ಉಪಹಾರವನ್ನು ಸೇವಿಸಿದರು. ನಂತರ ನಡೆದ ಕಾರ್‍ಯಕ್ರಮದಲ್ಲಿ ಶಾಸಕ ವೇದವ್ಯಾಸ ಕಾಮತ್ ಅವರು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರದ ಯಶಸ್ವಿ ನಾಲ್ಕೂವರೆ ವರ್ಷಗಳ ಸಾಧನೆಯನ್ನು ಸ್ಥಳೀಯರಿಗೆ ವಿವರಿಸಿದರು.

ಕಾರ್‍ಯಕ್ರಮದಲ್ಲಿ ಬಿಜೆಪಿ ಮುಖಂಡರಾದ ರವಿಶಂಕರ್ ಮಿಜಾರ್, ನಿತಿನ್ ಕುಮಾರ್, ರವೀಂದ್ರ ಕುಮಾರ್, ಪೂರ್‍ಣಿಮಾ, ದಿವಾಕರ ಪಾಂಡೇಶ್ವರ, ರಮೇಶ್ ಕಂಡೆಟ್ಟು, ಭಾಸ್ಕರ ಚಂದ್ರ ಶೆಟ್ಟಿ, ಜೇಮ್ಸ್ ಡಿಸೋಜಾ, ಮುತಾಲಿಬ್, ಶ್ರೀನಿವಾಸ ಶೆಟ್ಟಿ ನಾರ್‍ಯ, ಕಿಶೋರ್ ಕೊಟ್ಟಾರಿ, ರಾಮಚಂದ್ರ ಚೌಟ, ಅಜಯ್, ಸಂಧ್ಯಾ ವೇಂಕಟೇಶ್, ನಾರಾಯಣ ಗಟ್ಟಿ, ಮೋಹನ್ ಆಚಾರ್, ಉಮಾನಾಥ ಶೆಟ್ಟಿಗಾರ್, ಚರಿತ ಪೂಜಾರಿ, ಯೋಗೀಶ್ ಚೌಕಿ, ವಸಂತ ಪೂಜಾರಿ ಮತ್ತಿತ್ತರರು ಉಪಸ್ಥಿತರಿದ್ದರು.

Comments are closed.