ಉಡುಪಿ: ಮನೆಯ ಮೆಟ್ಟಿಲು ದಾಟುತ್ತಿರುವಾಗ ನಾಗರ ಹಾವು ಕಡಿತಕ್ಕೊಳಗಾಗಿ ವ್ಯಕ್ತಿಯೋರ್ವರು ಮೃತಪಟ್ಟ ಘಟನೆ ಬೈಂದೂರು ತಾಲೂಕಿನ ಯಡ್ತರೆ ಗ್ರಾಮದ ಕಲ್ಲಣ್ಕಿ ಎಂಬಲ್ಲಿ ನಡೆದಿದೆ.
ಇಲ್ಲಿನ ನಿವಾಸಿ ಸುಬ್ಬಣ್ಣ ಶೆಟ್ಟಿ(77) ಮೃತಪಟ್ಟ ದುರ್ದೈವಿ.
ಸುಬ್ಬಣ್ಣ ಶೆಟ್ಟಿಯವರು ಮನೆಯ ಅಂಗಳದಲ್ಲಿ ಕೃಷಿಗಾಗಿ ಇಟ್ಟಿದ್ದ ಅಗೆಯನ್ನು ನೋಡಲು ಮನೆಯ ಅಂಗಳಕ್ಕೆ ಬಂದು ನೋಡಿ ಮನೆಯ ಒಳಗೆ ಹೋಗುವ ಸಂದರ್ಭ ಮನೆಯ ಮೆಟ್ಟಿಲು ದಾಟುತ್ತಿರುವಾಗ ಮೆಟ್ಟಿನಲ್ಲಿದ್ದ ನಾಗರ ಹಾವು ಅವರ ಕಾಲಿಗೆ ಕಚ್ಚಿದ್ದು ಕೂಡಲೇ ಅವರನ್ನು ಚಿಕಿತ್ಸೆ ಬಗ್ಗೆ ಕುಂದಾಪುರ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಪ್ರಥಮ ಚಿಕಿತ್ಸೆ ಕೊಡಿಸಿ ನಂತರ ಹೆಚ್ಚಿನ ಚಿಕಿತ್ಸೆ ಬಗ್ಗೆ ಮಣಿಪಾಲ ಕೆಎಂಸಿ ಆಸ್ಪತ್ರೆಗೆ ದಾಖಲಿಸಿದ್ದು ಅಲ್ಲಿ ಚಿಕಿತ್ಸೆಯಲ್ಲಿದ್ದ ಸುಬ್ಬಣ್ಣ ಶೆಟ್ಟಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.
ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Comments are closed.