ಕರಾವಳಿ

ಕುಂದಾಪುರ(ಬೇಳೂರು): ರೈಲಿಗೆ ತಲೆಕೊಟ್ಟು ವ್ಯಕ್ತಿ ಆತ್ಮಹತ್ಯೆ

Pinterest LinkedIn Tumblr

ಕುಂದಾಪುರ: ವ್ಯಕ್ತಿಯೋರ್ವ ಚಲಿಸುತ್ತಿದ್ದ ರೈಲಿಗೆ ತಲೆಕೊಟ್ಟು ಆತ್ಮಹತ್ಯೆಗೆ ಶರಣಾದ ಘಟನೆ ತಾಲೂಕಿನ ಬೇಳೂರು ಕೋಣಬಗೆ ಎಂಬಲ್ಲಿ ನಡೆದಿದೆ. ಉಮೇಶ್ ಶೆಟ್ಟಿ (45) ಆತ್ಮಹತ್ಯೆಗೆ ಶರಣಾದವರು.

ಕೂಲಿ ಕಾರ್ಯ ಮಾಡುತ್ತಿದ್ದ ಉಮೇಶ್ ಶೆಟ್ಟಿ,ಕೆಲವಾರು ಸಮಯಗಳಿಂದ ಮಾನಸಿಕವಾಗಿ ಖಿನ್ನರಾಗಿದ್ದು ಮಾತ್ರವಲ್ಲದೇ ಕುಡಿತದ ಚಟ ಹೊಂದಿದ್ದರು. ಇದರಿಂದಲೇ ಬೇಸತ್ತು ಆತ್ಮಹತ್ಯೆಗೆ ಶರಣಾಗಿರಬಹುದೆಂದು ಅಂದಾಜಿಸಲಾಗಿದೆ. ಉಮೇಶ ಶೆಟ್ಟಿ ಪತ್ನಿ ಹಾಗೂ ಇಬ್ಬರು ಮಕ್ಕಳೊಂದಿಗೆ ವಾಸವಿದ್ದರು.

ಮುಂಜಾನೆ ಸುಮಾರಿಗೆ ಕೊಂಕಣ ರೈಲ್ವೇ ಹಳಿಯಲ್ಲಿ ವೇಗವಾಗಿ ಚಲಿಸುತ್ತಿದ್ದ ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡ ಉಮೇಶ್ ಅವರ ದೇಹ ಛಿದ್ರಛಿದ್ರವಾಗಿತ್ತು.

ಕೋಟ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Comments are closed.