ಮಂಗಳೂರು, ಫೆಬ್ರವರಿ.20:ಮೂವರು ವಿದ್ಯಾರ್ಥಿಗಳ ಮೇಲೆ ಅದೇ ಕಾಲೇಜಿನ ಇತರ ಕೆಲವು ವಿದ್ಯಾರ್ಥಿಗಳು ಹಲ್ಲೆ ನಡೆಸಿರುವ ಘಟನೆ ನಗರದ ಬೋಂದೇಲ್ನ ಎಂಜಿಸಿ ಕಾಲೇಜಿನಲ್ಲಿ ನಡೆದಿದ್ದು, ಈ ಬಗ್ಗೆ ಕಾವೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಹಲ್ಲೆಗೊಳಗಾದ ವಿದ್ಯಾರ್ಥಿಗಳನ್ನು ಮರವೂರಿನ ನಿವಾಸಿ ಮುಸ್ತಫಾ (17), ಕರಂಬಾರಿನ ಹಕೀಂ (17) ಮತ್ತು ಕರಂಬಾರಿನ ಮಸೂದ್ (18) ಎಂದು ಹೆಸರಿಸಲಾಗಿದೆ. ಇವರಲ್ಲಿ ಮುಸ್ತಫಾ ಮತ್ತು ಹಕೀಂ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕಾಲೇಜಿನ ಕೆಲವು ವಿದ್ಯಾರ್ಥಿಗಳು ಕಾಲೇಜಿಗೆ ಬರುವಾಗ ಕುಡಿತದ ಅಮಲಿನಲ್ಲಿರುತ್ತಾರೆ. ಅಲ್ಲದೆ, ಸಿಗರೇಟ್ಗಳನ್ನು ತರುತ್ತಿದ್ದಾರೆ ಎಂದು ಆರೋಪಿಸಿ ಇತರ ವಿದ್ಯಾರ್ಥಿಗಳು ಈ ಹಿಂದೆ ದೂರು ನೀಡಿದ್ದರು.
ಇದೇ ದ್ವೇಷದಿಂದ ನಾವೇ ದೂರು ನೀಡಿದ್ದೇವೆ ಎಂದು ಅನುಮಾನಿಸಿ ನಮ್ಮ ಮೇಲೆ ಸುಮಾರು 10ಮಂದಿಯ ವಿದ್ಯಾರ್ಥಿಗಳು ಹೊರಗಿನವರ ಜೊತೆಗೆ ಸೇರಿ ಹಲ್ಲೆ ನಡೆಸಿದ್ದಾರೆ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ.
Comments are closed.