ರಾಷ್ಟ್ರೀಯ

ನೀವು ಇನ್ನೂ ಸಿಂಗಲ್ಲಾ? ಹಾಗಾದ್ರೆ ತಮಿಳ್ನಾಡಿನ ಬಟಾನಿಕಲ್ ಗಾರ್ಡನ್​ಗೆ ನೋ ಎಂಟ್ರಿ

Pinterest LinkedIn Tumblr


ಚೆನ್ನೈ: ಅವಿವಾಹಿತರಿಗೆಲ್ಲಾ ಒಂದು ಬ್ಯಾಡ್​ ನ್ಯೂಸ್… ನೀವು ಮದುವೆಯಾಗಿಲ್ಲ ಇನ್ನೂ ಸಿಂಗಲ್ ಆಗಿಯೇ ಇದ್ದೀರೆಂದಾದರೆ ನಿಮಗೆ ತಮಿಳುನಾಡಿನ ಕೃಷಿ ವಿಶ್ವವಿದ್ಯಾಲಯದ ಬಟಾನಿಕಲ್ ಗಾರ್ಡನ್​ ಒಳಗೆ ನೋ ಎಂಟ್ರಿ.

ಕೃಷಿ ವಿಶ್ವವಿದ್ಯಾಲಯವು ಇಲ್ಲಿನ ಪ್ರಸಿದ್ಧ ಬಟಾನಿಕಲ್ ಗಾರ್ಡನ್​ಗೆ ಬ್ಯಾಚುಲರ್ಸ್​ಗೆ ಪ್ರವೇಶವನ್ನು ನಿಷೇಧಿಸಿದೆ. ಉದ್ಯಾನದಲ್ಲಿ ನಡೆಯುತ್ತಿರುವ ಅನೈತಿಕ ಚಟುವಟಿಕೆಯನ್ನು ಮಟ್ಟಹಾಕಲು ಈ ನಿರ್ಧಾರವನ್ನು ಕೈಗೊಂಡಿದೆ.

ಗಾರ್ಡನ್ ಒಳಗೆ ಪ್ರವೇಶಿಸಬೇಕಾದರೆ ನಿಮ್ಮ ಗುರುತಿನ ಚೀಟಿಯನ್ನು ತೋರಿಸಿ ಒಳಗೆ ಪ್ರವೇಶ ಪಡೆಯಬೇಕಾಗಿದೆ. ಈ ಕಾಯ್ದೆ ಜಾರಿಗೆ ತಂದಾಗಿನಿಂದ ಸುಮಾರು 50 ರಷ್ಟು ಪ್ರವಾಸಿಗರು ಕಡಿಮೆಯಾಗಿದ್ದಾರೆ.

ಅಧ್ಯಯನಕ್ಕೋಸ್ಕರ ಈ ಉದ್ಯಾನದಲ್ಲಿ ಬಹಳಷ್ಟು ವೈದ್ಯಕೀಯ ಗಿಡಗಳನ್ನು ನೆಡಲಾಗಿದೆ. ಆದರೆ ಪ್ರೇಮಿ​ಗಳು ಈ ಉದ್ಯಾನಕ್ಕೆ ಒಂದು ಅಲ್ಲಿನ ಗಿಡಗಳನ್ನು ಹಾಳುಗೆಡವುತ್ತಿದ್ದಾರೆ ಎನ್ನುವ ಆರೋಪ ಕೇಳಿ ಬರುತ್ತಿದೆ. ಅಲ್ಲಿ ನಡೆಯುವ ಅನೈತಿಕ ಚಟುವಟಿಕೆ ಹಾಗೂ ಅಸಭ್ಯವರ್ತನೆಯಿಂದ ಉಳಿದವರು ಉದ್ಯಾನಕ್ಕೆ ಆಗಮಿಸಲು ಮುಜುಗರವನ್ನುಂಟು ಮಾಡುತ್ತಿತ್ತು ಎನ್ನಲಾಗಿದೆ.

Comments are closed.