ಎಲ್ಲರ ನಿರೀಕ್ಷೆಯಂತೆ ಬಿಗ್ಬಾಸ್ ಮನೆಯಿಂದ ವೈಲ್ಡ್ಕಾರ್ಡ್ ಮೂಲಕ ಎಂಟ್ರಿ ಆಗಿದ್ದ ಸ್ಪರ್ಧಿ ಲಾಸ್ಯ ಈ ವಾರ ಮನೆಯಿಂದ ಎಲಿಮಿನೇಟ್ ಆಗಿ ಹೊರಬಂದಿದ್ದಾರೆ.
ದಿವಾಕರ್, ಲಾಸ್ಯ, ಸಮೀರ್ ಆಚಾರ್ಯ, ನಿವೇದಿತಾ ಗೌಡ, ಜಯ ಶ್ರೀನಿವಾಸನ್, ಅನುಪಮಾ ಗೌಡ ಈ ಆರೂ ಸ್ಪರ್ಧಿಗಳು ನಾಮಿನೇಶನ್ ಲಿಸ್ಟ್ನಲ್ಲಿದ್ದರು. ಈ ಬಾರಿ ಮನೆಯಿಂದ ಯಾರು ಹೊರಗೆ ಬರಬಹುದು ಎಂಬ ಕುತೂಹಲ ಎಲ್ಲರಿಗೂ ಇತ್ತು. ಬಹುತೇಕರು ಲಾಸ್ಯ ಹೊರಹೋಗುವುದನ್ನು ನಿರೀಕ್ಷಿಸಿದರು.
ಈ ಬಾರಿ ಸೇಫ್ ಆದ ಸ್ಪರ್ಧಿಗಳ ಹೆಸರನ್ನು ಸುದೀಪ್ ನೇರವಾಗಿ ಹೇಳದೆ ಸೇಫ್ ಆದ ಸ್ಪರ್ಧಿಗಳ ಮನೆಯವರ ಆಡಿಯೋವನ್ನು ಸ್ಪರ್ಧಿಗಳಿಗೆ ಕೇಳಿಸುವ ಮೂಲಕ ಆಶ್ಚರ್ಯ ಹಾಗೂ ಖುಷಿ ಉಂಟು ಮಾಡಿದರು.
ಮೊದಲು ಅನುಪಮಾ ತಂಗಿ ವಾಯ್ಸ್ ರೆಕಾರ್ಡ್ ಕೇಳಿಸುವ ಮೂಲಕ ಅನುಪಮಾ ಈ ಬಾರಿ ಸೇಫ್ ಎಂದು ಸುದೀಪ್ ಹೇಳಿದರು. ನಂತರ ನಿವೇದಿತಾ ತಾಯಿ, ದಿವಾಕರ್ ಪತ್ನಿ, ಸಮೀರ್ ಆಚಾರ್ಯ ಪತ್ನಿ ಆಡಿಯೋ ರೆಕಾರ್ಡ್ನ್ನು ಕೇಳಿಸಲಾಯಿತು.
ಕೊನೆಗೆ ಲಾಸ್ಯ ಹಾಗೂ ಜೈ ಶ್ರೀನಿವಾಸನ್ ಉಳಿದಿದ್ದು ಎಂದಿನಂತೆ ಇತರ ಸ್ಪರ್ಧಿಗಳ ಬಳಿ ಮನೆಯಿಂದ ಯಾರು ಹೊರಹೋಗಬಹುದು ಎಂದು ಸುದೀಪ್ ಪ್ರಶ್ನಿಸಿದರು. ಕೊನೆಗೆ ಜೈ ಶ್ರೀನಿವಾಸನ್ ಪತ್ನಿ ಅವರ ಆಡಿಯೋ ಕೇಳಿಸುವ ಮೂಲಕ ಅವರು ಸೇಫ್ ಎಂದು ಹೇಳಿದರು. ಅರ್ಧದಲ್ಲಿ ಬಿಗ್ಬಾಸ್ ಮನೆಗೆ ಹೋಗಿದ್ದ ಲಾಸ್ಯ ಅರ್ಧದಲ್ಲೇ ವಾಪಸ್ ಬರುವಂತಾಯಿತು.
ಇನ್ನು ‘ವಾರದ ಕಥೆ ಕಿಚ್ಚನ ಜೊತೆ ‘ ಎಪಿಸೋಡ್ನಲ್ಲಿ ಸಮೀರ್ ಆಚಾರ್ಯ ಮೇಲೆ ಸಂಯುಕ್ತಾ ಕೈ ಮಾಡಿದ ವಿಚಾರವಾಗಿ ಚಂದನ್ ಹಾಗೂ ದಿವಾಕರ್ ಹೊರತುಪಡಿಸಿದರೆ ಉಳಿದ ಸ್ಪರ್ಧಿಗಳು ದನಿ ಎತ್ತಲಿಲ್ಲ ಎಂದು ಇತರ ಸ್ಪರ್ಧಿಗಳಿಗೆ ಸುದೀಪ್ ಕ್ಲಾಸ್ ತೆಗೆದುಕೊಂಡರು. ಅಲ್ಲದೆ ಸಣ್ಣ ಪುಟ್ಟ ವಿಚಾರಗಳಿಗೆ ಸ್ಪರ್ಧಿಗಳು ಕೋಪ ಮಾಡಿಕೊಂಡು ಜಗಳ ಮಾಡಿಕೊಳ್ಳಬೇಡಿ ಎಂದು ಬುದ್ಧಿಮಾತನ್ನೂ ಸಹ ಹೇಳಿದರು.
Comments are closed.