ರಾಷ್ಟ್ರೀಯ

ಪ್ರೀತಿಸಿ ಮದ್ವೆಯಾಗಿದ್ದಕ್ಕೆ ಲವ್​ ಜಿಹಾದ್​ ಹೆಸರಿನಲ್ಲಿ ಮುಸ್ಲಿಂ ಕಾರ್ಮಿಕನ ಸಜೀವ ದಹನ ! ವೀಡಿಯೋ ವೈರಲ್ ….

Pinterest LinkedIn Tumblr

ಉದಯಪುರ(ರಾಜಸ್ಥಾನ): ಅಮಾನವೀಯ ಘಟನೆಯೊಂದರಲ್ಲಿ ‘ಲವ್ ಜಿಹಾದ್’ ಆರೋಪದ ಮೇಲೆ ಮುಸ್ಲಿಂ ಕಾರ್ಮಿಕನನ್ನು ರಾಜಸ್ಥಾನದ ರಾಜ್‌ಸಮಂದ್ ಜಿಲ್ಲೆಯಲ್ಲಿ ಸಜೀವವಾಗಿ ದಹಿಸಿದ್ದು, ಈ ವೀಡಿಯೋ ವೈರಲ್ ಆಗಿದೆ.

ಯುವಕನೊಬ್ಬ ಯುವತಿಯನ್ನು ಪ್ರೀತಿಸಿ ಮದುವೆಯಾಗಿದಕ್ಕೆ ಲವ್​ ಜಿಹಾದ್​ ಎಂದು ಹೇಳಿ ಆತನನ್ನು ಬರ್ಬರವಾಗಿ ಕೊಲೆ ಮಾಡಿದ್ದಾನೆ. ಮಹಮ್ಮದ್​ ಭಟ್ಟ್​ ಶೇಕ್ ಎಂಬಾತನೇ ಕೊಲೆಯಾದ ದುರ್ದೈವಿ.

ರಾಜ್ಸಮಂದ್​ನಲ್ಲಿನ ರಾಜನಗರ ಏರಿಯಾದ ದೇವ್​ ಹೆರಿಟೇಜ್ ರಸ್ತೆಯಲ್ಲಿರುವ​ ಒಂದು ನಿರ್ಜನ ಪ್ರದೇಶಕ್ಕೆ ಮಹಮ್ಮದ್​ ಭಟ್ಟ್​ನನ್ನು ಕರೆದು ತಂದು ಕೃಷಿಗೆ ಬಳಸುವ ಸಲಕರಣೆಯಿಂದ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾನೆ.

ಇಷ್ಟಕ್ಕೆ ಸುಮ್ಮನಾಗದ ಕಿಡಿಗೇಡಿ ಯುವಕನ ಮೇಲೆ ಸೀಮೆ ಎಣ್ಣೆ ಸುರಿದ ಜೀವಂತ ದಹಿಸಿ ಕೊಲೆ ಮಾಡಿದ್ದಾನೆ. ಅಷ್ಟೇ ಅಲ್ಲದೆ, ಈ ಘಟನೆಯನ್ನು ಮೊಬೈಲ್​ನಲ್ಲಿ ಚಿತ್ರೀಕರಿಸಿ ನಂತರ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟು ಲವ್​ ಜಿಹಾದ್​ ಮಾಡಿದವರಿಗೆಲ್ಲಾ ಇದೇ ಶಿಕ್ಷೆ ಎಂದು ಎಚ್ಚರಿಕೆ ನೀಡಿದ್ದಾನೆ.

ಇನ್ನು ಈ ವಿಡಿಯೋ ವೈರಲ್​ ಆಗುತ್ತಿದ್ದಂತೆ ಎಚ್ಚೆತ್ತ ರಾಜಸ್ಥಾನ ಸರ್ಕಾರ ವಿಶೇಷ ತನಿಖಾ ತಂಡವೊಂದನ್ನು ರಚಿಸಿ ತನಿಖೆಗೆ ಆದೇಶ ನೀಡಿತು. ಜೈಪುರ ಎಸ್​ಪಿ ಮನೋಜ್​ ಕುಮಾರ್​ ನೇತೃತ್ವದಲ್ಲಿ ನಡೆದ ಕ್ಷಿಪ್ರ ಕಾರ್ಯಾಚರಣೆಯಿಂದ ಆರೋಪಿ ಸಿಕ್ಕಿಬಿದ್ದಿದ್ದಾನೆ. ಬಂಧಿತ ಆರೋಪಿಯನ್ನು ಶಂಬುನಾಥ್​ ರಾಯ್​ಗರ್​​ ಎಂದು ಹೇಳಲಾಗುತ್ತಿದೆ.

Comments are closed.