ಉದಯಪುರ(ರಾಜಸ್ಥಾನ): ಅಮಾನವೀಯ ಘಟನೆಯೊಂದರಲ್ಲಿ ‘ಲವ್ ಜಿಹಾದ್’ ಆರೋಪದ ಮೇಲೆ ಮುಸ್ಲಿಂ ಕಾರ್ಮಿಕನನ್ನು ರಾಜಸ್ಥಾನದ ರಾಜ್ಸಮಂದ್ ಜಿಲ್ಲೆಯಲ್ಲಿ ಸಜೀವವಾಗಿ ದಹಿಸಿದ್ದು, ಈ ವೀಡಿಯೋ ವೈರಲ್ ಆಗಿದೆ.
ಯುವಕನೊಬ್ಬ ಯುವತಿಯನ್ನು ಪ್ರೀತಿಸಿ ಮದುವೆಯಾಗಿದಕ್ಕೆ ಲವ್ ಜಿಹಾದ್ ಎಂದು ಹೇಳಿ ಆತನನ್ನು ಬರ್ಬರವಾಗಿ ಕೊಲೆ ಮಾಡಿದ್ದಾನೆ. ಮಹಮ್ಮದ್ ಭಟ್ಟ್ ಶೇಕ್ ಎಂಬಾತನೇ ಕೊಲೆಯಾದ ದುರ್ದೈವಿ.
ರಾಜ್ಸಮಂದ್ನಲ್ಲಿನ ರಾಜನಗರ ಏರಿಯಾದ ದೇವ್ ಹೆರಿಟೇಜ್ ರಸ್ತೆಯಲ್ಲಿರುವ ಒಂದು ನಿರ್ಜನ ಪ್ರದೇಶಕ್ಕೆ ಮಹಮ್ಮದ್ ಭಟ್ಟ್ನನ್ನು ಕರೆದು ತಂದು ಕೃಷಿಗೆ ಬಳಸುವ ಸಲಕರಣೆಯಿಂದ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾನೆ.
ಇಷ್ಟಕ್ಕೆ ಸುಮ್ಮನಾಗದ ಕಿಡಿಗೇಡಿ ಯುವಕನ ಮೇಲೆ ಸೀಮೆ ಎಣ್ಣೆ ಸುರಿದ ಜೀವಂತ ದಹಿಸಿ ಕೊಲೆ ಮಾಡಿದ್ದಾನೆ. ಅಷ್ಟೇ ಅಲ್ಲದೆ, ಈ ಘಟನೆಯನ್ನು ಮೊಬೈಲ್ನಲ್ಲಿ ಚಿತ್ರೀಕರಿಸಿ ನಂತರ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟು ಲವ್ ಜಿಹಾದ್ ಮಾಡಿದವರಿಗೆಲ್ಲಾ ಇದೇ ಶಿಕ್ಷೆ ಎಂದು ಎಚ್ಚರಿಕೆ ನೀಡಿದ್ದಾನೆ.
ಇನ್ನು ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತ ರಾಜಸ್ಥಾನ ಸರ್ಕಾರ ವಿಶೇಷ ತನಿಖಾ ತಂಡವೊಂದನ್ನು ರಚಿಸಿ ತನಿಖೆಗೆ ಆದೇಶ ನೀಡಿತು. ಜೈಪುರ ಎಸ್ಪಿ ಮನೋಜ್ ಕುಮಾರ್ ನೇತೃತ್ವದಲ್ಲಿ ನಡೆದ ಕ್ಷಿಪ್ರ ಕಾರ್ಯಾಚರಣೆಯಿಂದ ಆರೋಪಿ ಸಿಕ್ಕಿಬಿದ್ದಿದ್ದಾನೆ. ಬಂಧಿತ ಆರೋಪಿಯನ್ನು ಶಂಬುನಾಥ್ ರಾಯ್ಗರ್ ಎಂದು ಹೇಳಲಾಗುತ್ತಿದೆ.
Comments are closed.