ಕರಾವಳಿ

ಹಿರಿಯಡಕ ಸಾಮೂಹಿಕ ಪ್ರಾರ್ಥನೆಗೆ ಜನಸಾಗರ, ಮಂಗಳವಾರದಿಂದ ಕರಸೇವೆ ಪ್ರಾರಂಭ

Pinterest LinkedIn Tumblr

ಹಿರಿಯಡಕ: ಮಹತೋಭಾರ ಹಿರಿಯಡ್ಕ ಶ್ರೀ ವೀರಭದ್ರಸ್ವಾಮಿ ದೇವಸ್ಥಾನದ ಎರಡನೇ ಹಂತದ ಜೀರ್ಣೋದ್ದಾರ ಕಾರ್ಯಾರಂಭಕ್ಕಾಗಿ ಭರ್ಜರಿ ತಯಾರಿ ನಡೆಯುತ್ತಿದ್ದು, ತಾ.14-12-2017 ರಂದು ಶ್ರೀ ಕ್ಷೇತ್ರ ಹಿರಿಯಡಕ ದೇವರ ಗರ್ಭಗೃಹದ ಶಿಲಾನ್ಯಾಸ ಕಾರ್ಯಕ್ರಮದ ಅಂಗವಾಗಿ ನಾಳೆ ತಾ.04-12-2017 ರಂದು ಸಂಕೋಚ ಪ್ರಕ್ರಿಯೆ ಹಾಗು ಬಾಲಾಲಯ ಪ್ರತಿಷ್ಠೆ ಜರುಗಲಿದೆ.

ಇಂದು ಮುಂಜಾನೆ ಈ ಪ್ರಯುಕ್ತ ಊರ ಪರಊರ ನೂರಾರು ಭಕ್ತರು ಶ್ರೀ ದೇವರ ಸನ್ನಿಧಾನದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಆಡಳಿತ, ಅರ್ಚಕ, ಸಿಬ್ಬಂದಿ ವರ್ಗ, ಜೀರ್ಣೋದ್ದಾರ ಸಮಿತಿ, ಊರ ಪರವೂರ ಭಕ್ತಾಭಿಮಾನಿಗಳು ಉಪಸ್ಥಿತರಿದ್ದರು.

ಈಗಾಗಲೇ ಸುತ್ತಮುತ್ತಲಿನ ಅನೇಕ ಗ್ರಾಮಗಳಿಂದ ಸ್ವಯಂಸೇವಕರು ಕರಸೇವೆಗೆ ತಮ್ಮ ಹೆಸರನ್ನು ನೋಂದಾಯಿಸಿದ್ದು, ನಾಳೆಯಿಂದ ಹಗಲು ರಾತ್ರಿ ದೇವಸ್ಥಾನದ 2ನೇ ಹಂತದ ಜೀರ್ಣೋದ್ದಾರ ಕಾರ್ಯ ಪ್ರಾರಂಭವಾಗಲಿದೆ.

Comments are closed.