ಮಂಗಳೂರು, ಡಿಸೆಂಬರ್.25 : ವಾಜಪೇಯಿಯವರ ಹುಟ್ಟು ಹಬ್ಬದ ಅಂಗವಾಗಿ ಬಿಜೆಪಿ ವೈದ್ಯಕೀಯ ಪ್ರಕೋಷ್ಠ ದ.ಕ ಜಿಲ್ಲೆ, ಯೆನಪೋಯ ಡೆಂಟಲ್ ಅಂಡ್ ಮೆಡಿಕಲ್ ಕಾಲೇಜು ದೇರಳಕಟ್ಟೆ ಹಾಗೂ ಭಾರತೀಯ ಜನತಾ ಪಕ್ಷ ಮಂಗಳೂರು ಘಟಕದ ಅಶ್ರಯದಲ್ಲಿ ಬ್ರಹತ್ ಉಚಿತ ವೈದ್ಯಕೀಯ ಶಿಬಿರ ಬಾನುವಾರ ಉಳ್ಳಾಲದ ಬೊಳ್ಯಾರುನಲ್ಲಿ ಜರುಗಿತು.
ವಿಧಾನ ಪರಿಷತ್ ಮಾಜಿ ಸದಸ್ಯ ಹಿರಿಯ ಬಿಜೆಪಿ ನಾಯಕ ಮೋನಪ್ಪ ಭಂಡಾರಿ ಶಿಬಿರವನ್ನು ಉದ್ಘಾಟಿಸಿದರು.ಬಿಜೆಪಿ ವೈದ್ಯಕೀಯ ಪ್ರಕೋಷ್ಠದ ರಾಜ್ಯ ಸಹ ಸಂಚಾಲಕ ಡಾ ಅಣ್ಣಯ್ಯ ಕುಲಾಲ್ ಉಳ್ತೂರು ಕ್ಯಾಂಪ್ ಹಾಗು ಸವಲತ್ತು ಬಗ್ಗೆ ವಿವರಿಸಿದರು.
ಜಿಲ್ಲಾ ವೈದ್ಯಕೀಯ ಪ್ರಕೋಷ್ಠ ದ ಸಂಚಾಲಕ ಡಾ ರಾಘವೇಂದ್ರ ಭಟ್, ಯೆನಪೋಯ ಕಾಲೇಜು ಡೀನ್ ಶ್ರೀಪತಿ ಭಟ್, ಮಂಗಳೂರು ಬಿಜೆಪಿ ಮಂಡಲ ಅಧ್ಯಕ್ಷ ಸಂತೋಷ್ ಶೆಟ್ಟಿ ಹಾಗು ತಂಡ ಕಾರ್ಯಕ್ರಮ ವನ್ನು ಸಂಯೋಜಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.ಜಿಲ್ಲಾ ಪ್ರಕೋಷ್ಠ ದ ಸಹ ಸಂಚಾಲಕ ಡಾ ಹರೀಶ್ ಶೆಟ್ಟಿ ವಂದಿಸಿದರು.
ಶಿಬಿರದಲ್ಲಿ ನೂರಾರು ರೋಗಿಗಳು ಪಾಲ್ಗೊಳ್ಳುವ ಮೂಲಕ ಕ್ಯಾಂಪ್ ನ ಸದುಪಯೋಗ ಪಡೆದು ಕೊಂಡರು. ಇದೇ ಸಂದರ್ಭದಲ್ಲಿ ಬೊಳ್ಯಾರು ಗ್ರಾಮವನ್ನು ವೈದ್ಯಕೀಯ ಪ್ರಕೋಷ್ಠ ದ.ಕ ಜಿಲ್ಲೆ, ಯೆನಪೋಯ ಡೆಂಟಲ್ ಅಂಡ್ ಮೆಡಿಕಲ್ ಕಾಲೇಜು ದೇರಳಕಟ್ಟೆ, ಬಿಜೆಪಿ ಮಂಗಳೂರು ಘಟಕ ಸೇರಿ ವೈದ್ಯಕೀಯ ಸೇವೆಗಾಗಿ ದತ್ತು ಪಡೆಕೊಂಡರು.
ಜಿಲ್ಲೆಯ ವೈದ್ಯಕೀಯ ಪ್ರಕೋಷ್ಠದ ವಿವಿಧ ಘಟಕಗಳ ಆಶ್ರಯದಲ್ಲಿ ದ.ಕ ಜಿಲ್ಲೆಯ ಇನ್ನುಳಿದ ಕ್ಯಾಂಪ್ ಗಳು ಕಿನ್ನಿಗೋಳಿ ಯುಗಪುರುಷ, ಪೊಳಲಿ ದೇವಸ್ಥಾನದ ಪರಿಸರ, ಪುತ್ತೂರು ನಗರ ,ಬೆಳ್ತಂಗಡಿ ,ಸುಳ್ಯ ಹಾಗೂ ಮಂಗಳೂರಿನ ಬಲ್ಮಠ ಸೇರಿದಂತೆ ವಿವಿದೆಡೆಗಳಲ್ಲಿ ನಡೆಯಿತು.
ಶಿಬಿರದಲ್ಲಿ ತಜ್ಞ ವೈದ್ಯರು ಇ ಸಿ ಜಿ , ಕ್ಷ- ಕಿರಣ ಅಲ್ಟ್ರಾ ಸೌಂಡ್ ಸಕ್ಕರೆ ಕಾಯಿಲೆ ಹಾಗು ಎಲುಬು ಕೀಳು ತಪಾಸಣೆ ಗಳನ್ನ ಉಚಿತವಾಗಿ ತಪಾಷಣೆ ಮಾಡುವ ಮೂಲಕ ಈ ಅರೋಗ್ಯ ಶಿಬಿರದಲ್ಲಿ ಕೈಜೋಡಿಸಿದರು.