ಕರಾವಳಿ

ನೋಟ್ ಬ್ಯಾನ್ ಗೆ ವಿಶೇಷ ‌ಸಹಕಾರ‌ ; ಸಂಸದ ಕಟೀಲ್‌ರಿಂದ ವರ್ಧಮಾನ್ ಹೋಟೇಲ್ ‌ಮಾಲೀಕರಿಗೆ ಸಮ್ಮಾನ

Pinterest LinkedIn Tumblr

vardhaman_hotel_1

ಮಂಗಳೂರು : ಮೋದಿಯವರ ನೋಟ್ ಬ್ಯಾನ್ ಗೆ ವಿಶೇಷ ‌ಸಹಕಾರ‌ ನೀಡಿದ ಯೆಯ್ಯಾಡಿಯ ವರ್ಧಮಾನ್ ಹೋಟೇಲ್ ‌ಮಾಲೀಕರನ್ನು ಸಂಸದ ನಳಿನ್ ಕುಮಾರ್‌ ಕಟೀಲ್‌ ಅವರು ಸನ್ಮಾನಿಸಿ ಗೌರವಿಸಿದರು.

ಕ್ಯಾಶ್ ಲೆಸ್ ವ್ಯವಹಾರಕ್ಕೆ ಒತ್ತು ಕೊಡುವ ನಿಟ್ಟಿನಲ್ಲಿ ಮತ್ತು ಜನರಿಗೆ ಈ ಬಗ್ಗೆ ಸರಿಯಾದ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಇವರ ಸೇವೆ ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದ ಸಂಸದರು, ಬರುವ ದಿನಗಳಲ್ಲಿ ಪ್ರತಿಯೊಂದು ವಾರ್ಡುಗಳಲ್ಲಿ ಕಾರ್ಯಾಗಾರ ಹಮ್ಮಿಕೊಂಡು ರಿಕ್ಷಾಚಾಲಕರಿಗೆ, ತರಕಾರಿ, ಹಾಲು, ಮೀನು ಮಾರಾಟಗಾರರಿಗೆ, ಸಣ್ಣ ವ್ಯಾಪಾರಿಗಳಿಗೆ, ಗೃಹಿಣಿಯರಿಗೆ, ಜನಸಾಮಾನ್ಯರಿಗೆ ಕ್ಯಾಶ್ ಲೆಸ್ ವ್ಯವಹಾರಗಳ ಪರಿಣಿತರಿಂದ ಈ ಬಗ್ಗೆ ಯೋಗ್ಯ ಮಾರ್ಗದರ್ಶನವನ್ನು ಕೊಡಲು ಚಿಂತನೆ ನಡೆಸಲಾಗಿದೆ ಎಂದು ಹೇಳಿದರು.

vardhaman_hotel_2 vardhaman_hotel_3 vardhaman_hotel_4 vardhaman_hotel_5

ಈ ವೇಳೆ ಮಂಗಳೂರು ನಗರ ದಕ್ಷಿಣ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಧ್ಯಕ್ಷ ಡಿ. ವೇದವ್ಯಾಸ ಕಾಮತ್, ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಜಗನ್ನಾಥ ಶೆಟ್ಟಿ ಬಾಳ, ಬಿಜೆಪಿಯ ಕಚೇರಿ ಕಾರ್ಯದರ್ಶಿ ಗುರುಚರಣ್ ಹಾಗೂ ಮತ್ತಿತ್ತರರು ಉಪಸ್ಥಿತರಿದ್ದರು.

Comments are closed.