ಮಂಗಳೂರು ಡಿಸೆಂಬರ್.17: ಕದ್ರಿ ಪೊಲೀಸರು ನಡೆಸಿದ ಮಹತ್ವದ ಕಾರ್ಯಾಚರಣೆಯೊಂದರಲ್ಲಿ ಬಿಜೈ ರಾಜ ಕೊಲೆ ಪ್ರಕರಣದ ಪ್ರಮುಖ ಆರೋಪಿ, ಕುಖ್ಯಾತ ರೌಡಿ ಪ್ರದೀಪ್ ಮೆ೦ಡನ್ ( 45) ನನ್ನು ಬಂಧಿಸಿದ್ದಾರೆ,
ಭೂಗತ ಪಾತಕಿ ರವಿ ಪೂಜಾರಿ ಸಹಚರ ಎನ್ನಲಾದ ಪ್ರದೀಪ್ ಮೆ೦ಡನ್ನನ್ನು ಗುರುವಾರ ಮಧ್ಯಹ್ನ ನಗರದ ಕದ್ರಿ ಪಾರ್ಕ್ ಸಮೀಪವಿರುವ ರೆಸ್ಟೋರೆಂಟ್ ಒಂದರ ಬಳಿ ಬಂಧಿಸಲಾಗಿದೆ. ಈ ಸಂದರ್ಭ ಮೆಂಡನ್ ಬಳಿಯಿದ್ದ ಒಂದು ಪಿಸ್ತೂಲ್ ಹಾಗೂ ಜೀವಂತ ಗುಂಡುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಕೊಲೆ, ಕೊಲೆಯತ್ನ ಸೇರಿದಂತೆ ಹಲವು ಪ್ರಕರಣದಲ್ಲಿ ನ್ಯಾಯಾಲಕ್ಕೆ ಹಾಜರಾಗದೆ ತಲೆ ಮರೆಸಿ ಕೊಂಡಿದ್ದ ಮೆಂಡನ್ 2012ರಲ್ಲಿ ಫಳ್ನಿರ್ ನಲ್ಲಿ ನಡೆದ ಬಿಜೈ ರಾಜಾ ಕೊಲೆ ಪ್ರಕರಣದಲ್ಲಿ ಬಂಧಿತನಾಗಿ ಬಳಿಕ ನ್ಯಾಯಾಲಯದಲ್ಲಿ ಜಾಮೀನು ಪಡೆದು ಹೊರಬಂದಿದ್ದ.
ಮೂಲತಹ ಉಡುಪಿ ನಿವಾಸಿಯಾಗಿರುವ ಪ್ರದೀಪ್ ಮೆಂಡನ್ನನ್ನು 2013ರಲ್ಲಿ ಮಂಗಳೂರು ಪೊಲೀಸರು ಗೂಂಡಾ ಕಾಯ್ದೆಯಡಿ ಬಂಧಿಸಿ ಜೈಲಿಗಟ್ಟಿದ್ದರು.
Comments are closed.