ಕರಾವಳಿ

ಕೆ ಐ ಸಿ ಹೋರ್ ಅಲ್ ಅಂಝ್ ಘಟಕ ಅಧ್ಯಕ್ಷರಾಗಿ ಅಬ್ದುಲ್ ಬಾರಿ, ಪ್ರಧಾನ ಕಾರ್ಯದರ್ಶಿಯಾಗಿ ಹಾರೀಸ್ ಪಾಪೆತ್ತಡ್ಕ

Pinterest LinkedIn Tumblr

14054183_1063805467023557_7143122310094433838_n

ಕೆ ಐ ಸಿ ದುಬೈ ಸಮಿತಿಯ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಕೆ ಐ ಸಿ ಹೋರ್ ಅಲ್ ಆಂಜ್ ಘಟಕ ನವೀಕರಣ ಹಾಗೂ ಮೌಲೂದ್ ಮಜ್ಲೀಸ್ ಕಾರ್ಯಕ್ರಮವು ಅಲ್ ಆಂಜ್ ನಲ್ಲಿರುವ ಅಶ್ರಫ್ ಅಂಜದಿಯವರ ನಿವಾಸದಲ್ಲಿ ಸಮಿತಿಯ ಅಧ್ಯಕ್ಷರಾದ ಬಹು!ಅಶ್ರಫ್ ಅಮ್ಜದಿ ಯವರ ಅದ್ಯಕ್ಷತೆಯಲ್ಲಿ ನೆರವೇರಿತು .

ಬಹು! ಅಬ್ದುಲ್ ಹಮೀದ್ ಮುಸ್ಲಿಯಾರ್ ನೀರ್ಕಜೆ ಯವರ ದುಆ ದೊಂದಿಗೆ ಆರಂಭವಾದ ಸಭೆಯಲ್ಲಿ ಹಾರಿಸ್ ಪಾಪೆತ್ತಡ್ಕ ರವರು ಸ್ವಾಗತಿಸಿದರು . ಬಹು! ಹಮೀದ್ ಮುಸ್ಲಿಯಾರ್ ರವರು ಮಾತನಾಡಿ ಕೆ ಐ ಸಿ ಎಂಬ ಸ್ಥಾಪನೆಯ ಮಹತ್ವವನ್ನು ವಿವರಿಸಿ ಅಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳಿಗೆ ಸಹಾಯ ಮಾಡಿದಾಗ ನಮಗೆ ಸಿಗುವ ಪ್ರತಿಫಲಗಳನ್ನು ವಿವರಿಸಿ ಪ್ರತಿಯೊಬ್ಬರೂ ಇಖ್ಲಾಸನೊಂದಿಗೆ ಕಾರ್ಯಪ್ರವರ್ತಿಸಿ ,ರಸೂಲ್ (ಸ .ಅ)ರವರು ವಿದ್ಯಾಭ್ಯಾಸಕ್ಕೆ ನೀಡಿದ ಮಹತ್ವವನ್ನು ವಿವರಿಸಿ ರಸೂಲ್(ಸ.ಅ) ರವರ ಚರ್ಯೆಯನ್ನು ಅನುಸರಿಸದ ಯಾರೊಬ್ಬರೂ ನೈಜ ಮುಸಲ್ಮಾನ ಆಗಲಾರ . ಆದುದರಿಂದ ಪ್ರತಿಯೊಬ್ಬರೂ ನಬಿ ವಚನವನ್ನು ಪಾಲಿಸಿ, ಕೆ ಐ ಸಿ ಯಂತಹ ಸ್ಥಾಪನೆಯನ್ನು ಬೆಳೆಸಲು ಸರ್ವರ ಸಹಕಾರ ಅತ್ಯಗತ್ಯ ವಾಗಿದ್ದು ಪ್ರತಿಯೊಬ್ಬರೂ ಸಹಕರಿಸುವಂತೆ ಕೋರಿ ಪವಿತ್ರ ಕುರಾನ್ ಸೂಕ್ತದೊಂದಿಗೆ ಸಭೆಯನ್ನು ಉದ್ಘಾಟಿಸಿದರು .

ಪ್ರ.ಕಾರ್ಯದರ್ಶಿ ಹಾರಿಸ್ ಪಾಪೆತ್ತಡ್ಕ ರವರು ಗತ ವರ್ಷದ ವರದಿ ಹಾಗೂ ಲೆಕ್ಕ ಪತ್ರವನ್ನು ಮಂಡಿಸಿದರು . ಸಭಾಧ್ಯಕ್ಷರಾದ ಬಹು! ಅಶ್ರಫ್ ಅಮ್ಜದಿ ಯವರು ಮಾತನಾಡಿ , ಕಳೆದ ಒಂದು ವರ್ಷದಿಂದ ಹೋರ್ ಅಲ್ ಘಟಕ ದೊಂದಿಗೆ ಸಹಕರಿಸಿದ ಪ್ರತಿಯೊಬ್ಬರಿಗೂ ಕೃತಜ್ಞತೆಗಳನ್ನು ಸಲ್ಲಿಸಿ ಕಮಿಟಿಯನ್ನು ಬರ್ಕಾಸ್ತು ಗೊಳಿಸಿದರು.

ನಂತರ ಮಾತನಾಡಿದ ಕೆ ಐ ಸಿ ದುಬೈ ಸಮಿತಿಯ ಅಧ್ಯಕ್ಷರಾದ ಜ! ಅಶ್ರಫ್ ಖಾನ್ ಮಾಂತೂರ್ ರವರು ಮಾತನಾಡಿ ಹೋರ್ ಅಲ್ ಆಂಜ್ ಘಟಕದ ಸಾಧನೆಯನ್ನು ಮುಕ್ತ ಕಂಠದಿಂದ ಪ್ರಶಂಸಿಸಿ ಇನ್ನೂ ಹೆಚ್ಚಿನ ಮುತುವರ್ಜಿ ವಹಿಸಿ ಹೆಚ್ಚಿನ ಸಹಾಕಾರ ನೀಡಬೇಕೆಂದು ಕೋರಿ 2016 -17 ನೇ ಸಾಲಿಗೆ ನೂತನ ಸಮಿತಿ ರಚನೆಗೆ ಚಾಲನೆ ನೀಡಿದರು .

ಗೌರವ ಸಲಹೆಗಾರರು : ಬಹು!ಅಶ್ರಫ್ ಅಮ್ಜದಿ, ಜ! ಉಮ್ಮರ್ ರೆಂಜಲಾಡಿ

ಗೌರವ ಅಧ್ಯಕ್ಷರು : ಜ! ಮೊಯಿದೀನ್ ಸುಳ್ಯ

ಅಧ್ಯಕ್ಷರು : ಜ! ಅಬ್ದುಲ್ ಬಾರಿ
ಉಪಾಧ್ಯಕ್ಷರು :ಜ!ಸಂಶುದ್ದೀನ್ ಬಲಕ್ಕಾಡ್
ಜ! ಆಸಿಫ್ ಪಟ್ಟೆ
ಜ!ಅಬ್ದುಲ್ ರಝಕ್ ಕುರಿಯ

ಪ್ರ. ಕಾರ್ಯದರ್ಶಿ: ಜ! ಹಾರಿಸ್ ಪಾಪೆತ್ತಡ್ಕ
ಕಾರ್ಯದರ್ಶಿ:ಜ! ರಫೀಕ್ ತಿಂಗಳಾಡಿ
ಜ! ಸಮೀರ್  ತಿಂಗಳಾಡಿ

ಕೋಶಾಧಿಕಾರಿ : ಜ! ಇಸ್ಮಾಯಿಲ್ ತಿಂಗಳಾಡಿ

ಲೆಕ್ಕ ಪರಿಶೋಧಕರು : ಜ! ಮಹಮ್ಮದ್ ಪಲ್ಲತೂರು

ಸಂಘಟನಾ ಕಾರ್ಯದರ್ಶಿ: ಜ! ಸಿನಾನ್  ಪರ್ಲಂಪಾಡಿ
ಜ! ಸಮೀರ್ ಪಟ್ಟೆ
ಜ! ಷರೀಫ್ ಅದ್ರೋಡಿ
ಜ! ಇಸಾಕ್ ಕೂರ್ನಡ್ಕ

ಸಂಚಾಲಕರು: ಜ! ಶಾಫಿ ಪರ್ಲಂಪಾಡಿ
ಜ! ಅಝರುದ್ದೀನ್ ಸುಳ್ಯ
ಜ! ಹುಸೈನ್ ಸುಳ್ಯ
ಜ! ಮಿರಾಜ್ ಸುಳ್ಯ
ಜ! ಇಬ್ರಾಹಿಂ ಕುಂಬ್ರ

ಸದಸ್ಯರು : ಜ! ಅಲಿ ಮುಡಿಪು
ಜ! ಸುಹೈಲ್ ಸುಳ್ಯ
ಜ! ಶಿಹಾಬ್ ಸುಳ್ಯ
ಜ! ಖಲೀಲ್ ಈಶ್ವರಮಂಗಿಲ
ಜ! ಇಸ್ಮಾಯಿಲ್ ಅಜಲಾಡಿ
ಜ! ರಫೀಕ್ ಬದಿಯಡ್ಕ
ಜ! ಇಸ್ಮಾಯಿಲ್ ಮಲಪ್ಪುರಂ

ನಂತರ ಮಾತನಾಡಿದ ಕೆ ಐ ಸಿ ರಾಷ್ಟ್ರೀಯ ಸಮಿತಿಯ ಪ್ರ. ಕಾರ್ಯದರ್ಶಿ ನೂರ್ ಮಹಮ್ಮದ್ ನೀರ್ಕಜೆ ಯವರು ಅಕಾಡೆಮಿಯಲ್ಲಿ ನಡೆಯುತ್ತಿರುವ ಕಾರ್ಯಚಟುವಟಿಕೆಗಳನ್ನು ವಿವರಿಸಿ, ದಿನದಿಂದ ದಿನಕ್ಕೆ ಖರ್ಚು ವೆಚ್ಚಗಳು ಹೆಚ್ಚುತ್ತಿದ್ದು , ನಿಮ್ಮಂತಹ ನಿಸ್ವಾರ್ಥ ಸದಸ್ಯರ ಸಹಕಾರದ ಮೂಲಕ ಮಾತ್ರ ಮುಂದಕ್ಕೆ ಸಾಗಲು ಸಾಧ್ಯ ಆದುದರಿಂದ ಪ್ರತಿಯೊಬ್ಬರೂ ಶಕ್ತಿ ಮೀರಿ ಶ್ರಮಿಸಬೇಕೆಂದು ಕರೆಯಿತ್ತರು.

ನೂತನ ಅಧ್ಯಕ್ಷರಾದ ಜ! ಅಬ್ದುಲ್ ಬಾರಿ ಯವರು ಮಾತನಾಡಿ ಪ್ರತಿಯೊಬ್ಬರೂ ಒಳ್ಳೆಯ ಇಖ್ಲಾಸ್ ನೊಂದಿಗೆ ಪ್ರವರ್ತಿಸಿ ಮುಂದಿನ ಅವಧಿಯಲ್ಲಿ ಹೋರ್ ಅಲ್ ಘಟಕವನ್ನು ಮಾದರಿ ಘಟಕವನ್ನು ಆಗಿ ಪರಿವರ್ತಿಸುವ ಭರವಸೆಯನ್ನು ನೀಡಿದರು. ಜ! ಮುಸ್ತಫಾ ಗೂನಡ್ಕ , ಜ! ಅಶ್ರಫ್ ಅರ್ತಿಕೆರೆ , ಜ! ಅಶ್ರಫ್ ಪರ್ಲಡ್ಕ , ಜ! ಇಸ್ಮಾಯಿಲ್ ತಿಂಗಳಾಡಿ, ಜ! ಉಮ್ಮರ್ ರೆಂಜಲಾಡಿ, ಮೊದಲಾದವರು ಸಂದರ್ಭಯೋಚಿತವಾಗಿ ಮಾತನಾಡಿ ನೂತನ ಸಮಿತಿಗೆ ಶುಭವನ್ನು ಹಾರೈಸಿದರು.

Comments are closed.