ಮಂಗಳೂರು, ನವೆಂಬರ್.30 : ಮಂಗಳೂರು ನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯ ಪಾಂಡೇಶ್ವರದಲ್ಲಿರುವ ಕಾರ್ಪೋರೇಶನ್ ಬ್ಯಾಂಕಿನ ಪ್ರಧಾನ ಕಛೇರಿಯ ವತಿಯಿಂದ ಪೊಲೀಸ್ ಇಲಾಖೆಗೆ ರಸ್ತೆ ಸುರಕ್ಷತೆಯ ಕಾರ್ಯನಿರ್ವಾಹಣೆಗಾಗಿ 100 ಬ್ಯಾರಿಕೇಡ್ ಗಳನ್ನು ಹಸ್ತಾಂತರಿಸಲಾಯಿತು. ಮಂಗಳೂರು ನಗರ ಪೊಲೀಸ್ ಆಯುಕ್ತರಾದ ಶ್ರೀ ಎಂ ಚಂದ್ರಶೇಖರ್ ಅವರು ಕಾರ್ಪೋರೇಶನ್ ಬ್ಯಾಂಕಿನ ಆಡಳಿತಾ ನಿರ್ದೇಶಕ ಶ್ರೀ ಜೈಕುಮಾರ್ ಗರ್ಗ್ ಅವರಿಂದ ಈ ಬ್ಯಾರಿಕೇಡ್ ಗಳನ್ನು ಸ್ವೀಕರಿಸಿದರು.
ಕಾರ್ಪೋರೇಶನ್ ಬ್ಯಾಂಕಿನ ಪ್ರದಾನ ಕಛೇರಿಯ ಜಿ,ಎಂ ಶ್ರೀ ಶಿವರಾಜ್ ಮಿಶ್ರಾ, ಡಿ.ಜಿ.ಎಂ ಶ್ರೀ ವಿಠಲ್ ಶೆಣೈ, ಎ.ಜಿ.ಎಂ/ಸಿ.ಎಸ್.ಒ ಕ್ಯಾಪ್ಟನ್ ಕಮಲ್ ಸಿಂಗ್ ನೇಗಿ ಹಾಗೂ ಮಂಗಳೂರು ಉಪ ಪೊಲೀಸ್ ಆಯುಕ್ತರಾದ ಶ್ರೀ ಕೆ.ಎಂ.ಶಾಂತರಾಜು ಡಾ.ಸಂಜೀವ ಎಂ. ಪಾಟೀಲ್, ಸಂಚಾರ ಉಪ ವಿಭಾಗದ ಎ.ಸಿ.ಪಿ, ಶ್ರೀ ತಿಲಕಚಂದ್ರರವರು ಹಾಗೂ ಇನ್ನಿತರ ಪೊಲೀಸ್ ಅಧಿಕಾರಿಗಳು ಈ ಸಂಧರ್ಭದಲ್ಲಿ ಉಪಸ್ಥಿತರಿದ್ದರು.
Comments are closed.